ಕನ್ನಡಪ್ರಭ ವಾರ್ತೆ ಉಡುಪಿ
ಸಂಸ್ಥೆಯ ಅಧ್ಯಕ್ಷ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಎನ್. ನಾಗರಾಜ ಬಲ್ಲಾಳ್, ಶಿಕ್ಷಣತಜ್ಞ ಮಹಾಬಲೇಶ್ವರ ರಾವ್ ರಾವ್, ಸಂಸ್ಥೆಯ ಟ್ರಸ್ಟಿಗಳಾದ ರೂಪಾ ಬಲ್ಲಾಳ್, ಹರಿ ಭಟ್, ಸುದರ್ಶನ ರಾವ್, ಲಕ್ಷ್ಮೀನಾರಾಯಣ, ಸುದರ್ಶನ ಸಾಮಗ, ಪಿಯು ಕಾಲೇಜಿನ ಪ್ರಾಂಶುಪಾಲ ವಿಜಯ ರಾವ್, ಶಾಲೆಯ ಪ್ರಾಂಶುಪಾಲೆ ಗೀತಾ ಕೋಟ್ಯಾನ್, ಛಾಯಾಚಿತ್ರಗ್ರಾಹಕ ಅರುಣಾಚಲ ಹೆಬ್ಬಾರ್ ಮತ್ತಿತರರಿದ್ದರು.
ಅರುಣಾಚಲ ಹೆಬ್ಬಾರ್ ಅವರು ಶ್ರೀ ವಿಶ್ವೇಶ ತೀರ್ಥರ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಂದ ಆಕರ್ಷಿತಗೊಂಡು ಅವರೊಂದಿಗೆ ಸಂಚರಿಸಿ ತೆಗೆದಿರುವ ಹಳೆಯ ಛಾಯಾಚಿತ್ರಗಳು ಈ ಪ್ರದರ್ಶನದಲ್ಲಿವೆ. ಪ್ರಮುಖವಾಗಿ ಉತ್ತರ ಭಾರತ ಯಾತ್ರೆ ಸಂದರ್ಭದಲ್ಲಿ ದೆಹಲಿ, ಬೋದ್ ಗಯಾ, ಹರಿದ್ವಾರ, ಕಾಶಿ, ಗಯಾ, ಅಯೋಧ್ಯೆ, ಬದರಿನಾಥ ಮುಂತಾದ ತೀರ್ಥಕ್ಷೇತ್ರಗಳ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಪ್ರದರ್ಶನವು ಶನಿವಾರದವರೆಗೆ ನಡೆಯಲಿದೆ.