ಮೂಡುಬಿದಿರೆ: ನಾವು ಎಷ್ಟು ಕಾಲ ಬದುಕಿದ್ದೇವೆ ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಸದಾ ಉಳಿಯುವಂತ ಬದುಕು ಸಾಗಿಸುವುದು ಮುಖ್ಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಮೃಣ್ಮಯಮೂರ್ತಿ ರಚಿಸುತ್ತಿರುವ ಜಗನ್ನಾಥ ಪ್ರಭು, ಯುವ ವಾಹಿನಿಯ ಪ್ರಮುಖ ಜಗದೀಶ್ ಚಂದ್ರ ಡಿ.ಕೆ. ಹಾಗೂ ಪರಿಸರ ಸ್ನೇಹಿ ಕಾರ್ಯಕರ್ತೆ ಸಂಧ್ಯಾ ಭಟ್ ಅವರನ್ನು ಸಮ್ಮಾನಿಸಲಾಯಿತು.ಚೌಟರ ಅರಮನೆಯ ಕುಲದೀಪ ಎಂ. ಶ್ರೀಪತಿ ಭಟ್, ಜಗದೀಶ ಅಧಿಕಾರಿ, ವಕೀಲ ಶರತ್ ಡಿ. ಶೆಟ್ಟಿ ಕೆ. ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ಅಮರಶ್ರೀ ಶೆಟ್ಟಿ ಇರುವೈಲ್ ಬಿಲ್ಲವ ಸಂಘನೆ ಅಧ್ಯಕ್ಷ ಕುಮಾರ್ ಪೂಜಾರಿ, ಮಯೂರಿ ಸಿಲ್ಸ್ನ ರಾಜೇಂದ್ರ, ಕುಮಾರ್, ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಎಚ್. ಸುರೇಶ್ ಪ್ರಭು, ದೇವಸ್ಥಾನದ ಮೊಕ್ತಸರ ಗುರುಪ್ರಸಾದ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯ್ಕ ಸಹಿತ ಪದಾಧಿಕಾರಿಗಳಿದ್ದರು.ಸಂಚಾಲಕ ರಂಜಿತ್ ಶೆಟ್ಟಿ ಸ್ವಾಗತಿಸಿದರು. ಅಕ್ಷಯ ಪ್ರಸ್ತಾವನೆಗೈದರು. ಸಂದೀಪ್ ಶೆಟ್ಟಿ ಪಿಲಿಗೊಬ್ಬು ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ಸರ ಸಮರ್ಪಣೆ ಸಂಗೀತ ಮೊಸರು ಕುಡಿಕೆ ಉತ್ಸವ ಜರಗಿತು.