ಕನ್ನಡಪ್ರಭ ವಾರ್ತೆ ಮಧುಗಿರಿ
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ನಮ್ಮ ಹಿರಿಯರು ಊರಿನ ಒಳಗಡೆ ಯಾವುದೇ ಕೆಟ್ಟ ಶಕ್ತಿಗಳು ಪ್ರವೇಶಿಸದಿರಲಿ ತಾಯಿ ಜನರ ಹಿತ ಕಾಪಾಡಲಿ ಎಂಬ ದೃಷ್ಠಿಯಿಂದ ಪಟ್ಟಣ ಪ್ರವೇಶಿಸುವಲ್ಲಿ ಗ್ರಾಮ ದೇವತೆ ದೇವಸ್ಥಾನ ಕಟ್ಟಿಸಿದ್ದು, ರಾಜ್ಯದಲ್ಲಿ ದಂಡಿಮಾರಮ್ಮ ಜಾತ್ರೆಯು 11 ದಿನಗಳ ಕಾಲ ನಡೆಯುತ್ತದೆ. ವಿವಿಧ ಸಮುದಾಯಗಳ ರಥೋತ್ಸವ ಪ್ರಸಿದ್ಧಿ ಪಡೆದಿದೆ ಎಂದೇಳಿ ಆತ್ಮ ಸಾಕ್ಷಿ ಅಂತಃಕರಣವೇ ದೇವರು ಅದನ್ನು ಹಲವು ರೂಪ ಮತ್ತು ಹೆಸರಿನಿಂದ ಆರಾಧಿಸುತ್ತೇವೆ. ದಂಡಿಮಾರಮ್ಮ ಯುದ್ಧದ ಸಂದರ್ಭದಲ್ಲಿ ದಂಡಿನೊಡನೆ ಬಂದ ದೇವತೆ ಊರ ಹೊರಗೆ ನೆಲಸಿ ಯಾವುದೇ ಕೆಡುಕು ಒಳ ನುಗ್ಗದಂತೆ ಗ್ರಾಮದ ಜನರನ್ನು ರಕ್ಷಿಸುತ್ತಿದ್ದಾಳೆ. ಸಂಸ್ಕೃತಿ ,ಪರಂಪರೆ ಜಾತ್ರೆಯಲ್ಲಿ ಬೆರೆತು ಸಂಬಂಧಗಳನ್ನು ಗಟ್ಟಿಗೊಳಿಸುವುದು ಸಂಜೆ ಮನರಂಜನೆ ಕಾರ್ಯಕ್ರಮದಲ್ಲಿ ಉಪಯುಕ್ತ ವಿಚಾರ ವಿನಿಮಯ ಆಗುವುದು ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಂಜುನಾಥ್.ತುಮಕೂರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಪುರಸಭೆ ಮಾಜಿ ಸದಸ್ಯ ಎಂ.ವಿ.ಮಂಜುನಾಥ್ ಆಚಾರ್, ಮುಖಂಡರಾದ ಹರಿನಾಥ್ ಗೌಡ, ರಾಮೇಗೌಡ, ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಅರ್ಚಕರಾದ ಎಂ.ಎನ್.ಅರುಣಕುಮಾರ್, ಲಕ್ಷ್ಮೀಕಾಂತ ಆಚಾರ್,ಮುರುಳಿ,ಚಂದನ್ ಶರ್ಮಾ,ಮತ್ತು ಪಣ್ಣೆ ರೈತ ಮುಖಂಡರು ಇದ್ದರು.