ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್‌ ಕರೆ

KannadaprabhaNewsNetwork |  
Published : Jun 20, 2026, 02:00 AM IST
ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್‌ ಕರೆ | Kannada Prabha

ಸಾರಾಂಶ

ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್‌ ಇಡಲಾಗಿದೆ ಎಂಬ ಇಮೇಲ್‌ ಕರೆ ಬಂದ ಹಿನ್ನೆಲೆಯಲ್ಲಿ ಗುರುವಾರ ಕೆಲ ಕಾಲ ನ್ಯಾಯಾಲಯ ಕಲಾಪ ಬಂದ್‌ ಮಾಡಿ ತಪಾಸಣೆ ನಡೆಸಿದ ಘಟನೆ ನಡೆಯಿತು.

ಧಾರವಾಡ: ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್‌ ಇಡಲಾಗಿದೆ ಎಂಬ ಇಮೇಲ್‌ ಕರೆ ಬಂದ ಹಿನ್ನೆಲೆಯಲ್ಲಿ ಗುರುವಾರ ಕೆಲ ಕಾಲ ನ್ಯಾಯಾಲಯ ಕಲಾಪ ಬಂದ್‌ ಮಾಡಿ ತಪಾಸಣೆ ನಡೆಸಿದ ಘಟನೆ ನಡೆಯಿತು.

Kurunanidhi.kundi@underworld dog ಎಂಬ ಹೆಸರಿನ ಇಮೇಲ್‌ನಿಂದ ಜಿಲ್ಲಾ ನ್ಯಾಯಾಲಯಕ್ಕೆ ಬೆಳಗ್ಗೆ ಮೇಲ್‌ ಬಂದಿದೆ. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಬಾಂಬ್‌ ಸ್ಫೋಟಗೊಳ್ಳಲಿವೆ ಎಂದು ಕರೆ ಬಂದಿತ್ತು. ಈ ಸುದ್ದಿ ಗೊತ್ತಾದ ಕೂಡಲೇ ನ್ಯಾಯಾಲಯ ಸಿಬ್ಬಂದಿ ಉಪ ನಗರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರನ್ನು ಆವರಣದಿಂದ ಹೊರ ಕಳುಹಿಸಿದರು. ಜೊತೆಗೆ ಸುತ್ತಲೂ ಬಿಗಿ ಭದ್ರತೆ ನೀಡಲಾಯಿತು.

ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಆಗಮಿಸಿ ನ್ಯಾಯಾಲಯದ ಆವರಣದಲ್ಲಿ ತಪಾಸಣೆ ಮಾಡಲಾಯಿತು. ತದನಂತರ ಇದೊಂದು ಹುಸಿ ಕರೆ ಎಂದು ಗೊತ್ತಾದ ನಂತರ ಮಧ್ಯಾಹ್ನ 3ರ ನಂತರ ಎಂದಿನಂತೆ ಕಲಾಪಗಳು ಶುರುವಾದವು. ಜಿಲ್ಲಾ ನ್ಯಾಯಾಲಯಕ್ಕೆ ಇದು ಮೊದಲ ಬಾರಿಯ ಹುಸಿ ಕರೆ ಇಲ್ಲ. ಈಗಾಗಲೇ ನಾಲ್ಕೈದು ತಿಂಗಳ ಹಿಂದೆ ಇದೇ ರೀತಿಯ ಹುಸಿ ಕರೆ ಬಂದಿದ್ದನ್ನು ಸ್ಮರಿಸಬಹುದು. ಇಮೇಲ್‌ ಮೂಲಕ ಬಂದಿರುವ ಈ ಹುಸಿ ಕರೆಯ ಜಾಡು ಹಿಡಿದು ಉಪ ನಗರ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ಅಂಭಿಯಂತರ ಮೇಲೆ ಲೋಕಾ ದಾಳಿ

ಧಾರವಾಡ: ನಿರ್ಮಿತಿ ಕೇಂದ್ರದಲ್ಲಿ ಅಭಿಯಂತರ ಆಗಿರುವ ಸುರೇಂದ್ರಕುಮಾರ ಎಂಬುವರ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ಸುರೇಂದ್ರ ಕುಮಾರ ಅವರ ನಿಸರ್ಗ ಲೇಔಟ್‌ ಬಳಿ ಬಾಡಿಗೆ ಮನೆ ಹಾಗೂ ಇಸ್ಕಾನ್‌ ದೇವಸ್ಥಾನದ ಬಳಿಯ ಕಚೇರಿಗೆ ಏಕಕಾಲಕ್ಕೆ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ಲೋಕಾಯುಕ್ತ ಪೊಲೀಸರು ಸುರೇಂದ್ರ ಕುಮಾರ ಅವರು ನಡೆಸುತ್ತಿರುವ ಸರ್ಕಾರದ ಕಾಮಗಾರಿಗಳು, ಅದರ ಮೊತ್ತ ಸೇರಿದಂತೆ ಅನೇಕ ಮಾಹಿತಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ 15ರೊಳಗೆ ಇಲಾಖೆಗಳ ಕ್ರಿಯಾ ಯೋಜನಾ ವರದಿ ಸಲ್ಲಿಸಿ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ