ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಆತಂಕದಲ್ಲಿ ರೈತರು

KannadaprabhaNewsNetwork |  
Published : Feb 29, 2024, 02:06 AM IST
ಫೋಟೋ- 28ಜಿಬಿ2, 28ಜಿಬಿ3, 28ಜಿಬಿ4 ಮತ್ತು 28ಜಿಬಿ15ಜೆಸ್ಕಾಂ ಅಲಕ್ಷತನಕ್ಕೆ ಯಡ್ರಾಮಿ ಭಾಗದಲ್ಲಿ ರೈತರು ಪರೇಷಾನ | Kannada Prabha

ಸಾರಾಂಶ

ಯಡ್ರಾಮಿ ತಾಲೂಕು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅಳವಡಿಸಿರುವ ಮೇನ್ ಲೈನ್ ಹಾಗೂ ರೈತರ ಬೋರ್‌ವೆಲ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲೆಂದು ಹಾಕಿರುವ ವಿದ್ಯುತ್‌ ಕಂಬಗಳು ಉರುಳಿ ವರ್ಷ ಕಳೆದಿದ್ದರೂ ಸರಿಪಡಿಸದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಅಕಾಲಿಕ ವಿದ್ಯುತ್‌ ಪ್ರಸಾರದಿಂದಾಗಿ ಅಮಾಯಕ ಜೀವನ ಹಾಗೂ ರೈತರ ಬೆಳೆ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದೆ ಇದ್ದರು ಜೆಸ್ಕಾಂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಲೂಕು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅಳವಡಿಸಿರುವ ಮೇನ್ ಲೈನ್ ಹಾಗೂ ರೈತರ ಬೋರ್‌ವೆಲ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲೆಂದು ಹಾಕಿರುವ ವಿದ್ಯುತ್‌ ಕಂಬಗಳು ಉರುಳಿ ಬಿದ್ದು ವರ್ಷ ಕಳೆದಿದ್ದರೂ ಕ್ರಮಕೈಗೊಳ್ಳದ ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ನೆಲಕ್ಕೆ ಬಾಗಿರುವ ವಿದ್ಯುತ್‌ ಕಂಬಗಳು ಕೈಗನ್ನಡಿಯಾಗಿದೆ.

ಕಳೆದ ವರ್ಷ ಸುರಿದ ಗಾಳಿ ಮಿಶ್ರಿತ ಮಳೆಗೆ ಸುಂಬಡ, ದುಮ್ಮದ್ರಿ, ನಾಗರಹಳ್ಳಿ, ಮಳ್ಳಿ, ಕುಳಗೇರಿ, ಮುಂತಾದ ಗ್ರಾಮಗಳಿಗೆ ಮೇನ್ ಲೈನ್ ಹಾಗೂ ರೈತರ ಬೋರ್‌ವೆಲ್‌ಗಳಿಗೆಂದು ಪರ್ಯಾಯವಾಗಿ ಅಳವಡಿಸಲಾಗಿದ್ದ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದವು. ಈ ಕುರಿತಂತೆ ಸ್ಥಳೀಯ ರೈತರು ಜೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕೇವಲ ಆ ಕಂಬಗಳಿಗೆ ಸರಬರಾಜಾಗುವ ವಿದ್ಯುತ್‌ ಪೂರೈಕೆ ನಿಲ್ಲಿಸಿ, ನಾಳೆ ಬಂದು ಕಂಬವನ್ನು ಮತ್ತೆ ನಿಲ್ಲಿಸುವುದಾಗಿ ತೆರಳಿದವರು ಮೂರು ತಿಂಗಳ ಕಳೆದರೂ ಮತ್ತೆ ಈ ಕಡೆ ಮುಖ ಮಾಡಿಲ್ಲ. ಈ ಕಾರಣದಿಂದಾಗಿ ಕಂಬಗಳು ಉರುಳಿ ಬಿದ್ದಿರುವ ಗ್ರಾಮೀಣ ಭಾಗದ ರೈತರು ಜಮೀನಿನಲ್ಲಿ ಉಳಿಮೆ ಮಾಡಲು ತೊಂದರೆಯಾಗುತ್ತಿದೆ ಎಂದು ನಿಂಗಣ್ಣ ಹಾದಿಮನಿ ಆರೋಪಿಸಿದರು.

ಅಲ್ಲದೇ, ಜೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಕಳೆದ ಆರು ತಿಂಗಳದ ಹಿಂದೆ ಕಾಚಾಪುರ ಗ್ರಾಮದಲ್ಲಿ ಅಕಾಲಿಕ ವಿದ್ಯುತ್‌ ಪೂರೈಕೆಯಿಂದ ಮೃತಪಟ್ಟ ಘಟನೆಯಿಂದ ಗ್ರಾಮದ ಜನತೆ ಭೀತಿಯಲ್ಲಿ ಇದ್ದಾರೆ. ಉರುಳಿಬಿದ್ದ ಕಂಬದಲ್ಲಿ ಯಾವ ಕ್ಷ ಣದಲ್ಲಿ ವಿದ್ಯುತ್‌ ಪೂರೈಕೆ ಉಂಟಾಗಿ, ಯಾರ ಪ್ರಾಣ ಯಾವ ಸಮಯದಲ್ಲಿ ಕಳೆದುಕೊಳ್ಳುತ್ತಾ ಎಂಬ ಆತಂಕ ಮೂಡಿದೆ.

ಯಾವುದಾದರು ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ದೌಡಾಯಿಸುವ ಅಧಿಕಾರಿಗಳು ಅವಘಡ ನಡೆಯುವ ಮುನ್ನವೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಅವಘಡಗಳನ್ನು ತಡೆಯಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಆಕ್ರೋಶ ತಂದಿದೆ.ಈಗ ಪ್ರೆಸೆಂಟ್ 50 ಲಕ್ಷದು ಎಸ್ಟಿಮೇಟ್ ಸಬ್ಮಿಟ್ ಮಾಡಿದ್ದೇವೆ. ಜೆಸ್ಕಾಂ ಎಂಡಿ ಅವರ ಹತ್ತಿರ ಇದೇ ಪೈಲ್, ಇನ್ನೂ ಎರಡು ದಿನದಲ್ಲಿ ಸಬ್ಮಿಟ್ ಮಾಡುತ್ತಾರೆ. ಮಾಡಿದ ಕೂಡಲೇ ದುರಸ್ತಿ ಕಾರ್ಯ ಮಾಡುತ್ತೇವೆ.

ಭಾಗ್ಯವಂತ, ಜೆಸ್ಕಾಂ, ಎಇಇ, ಯಡ್ರಾಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!