ಕನ್ನಡಪ್ರಭ ವಾರ್ತೆ ಕಲಬುರಗಿ/ಆಳಂದ
ಶನಿವಾರ ಬೆಳಗಿನ ಜಾವ ಜಿಲ್ಲಾಡಳಿತ ಮೂಲಕ ಕುಟುಂಬಸ್ಥರಿಗೆ ವಿಜಯಕುಮಾರ್ ಪಾರ್ಥಿವ ಶರೀರ ಹಸ್ತಾಂತರಿಸಿದ ಬಳಿಕ ಸ್ವಗ್ರಾಮ ಸರಸಂಬಾದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನುಮ್, ಸಹಾಯಕ ಆಯುಕ್ತರು, ತಹಸೀಲ್ದಾರ ಪ್ರಕಾಶ ಹೊಸಮನಿ, ಬಂಧು ಬಾಂಧವರು ಮತ್ತು ಗ್ರಾಮಸ್ಥರು ಸೇರಿದಂತೆ ನೂರಾರು ಜನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರಲ್ಲದೆ ಮೃತನ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವನ ಹೇಳಿದರು.ಮೂವರು ಮಕ್ಕಳು ಸ್ವಗ್ರಾಮ ಸರಸಂಬಾದ ಖಾಸಗಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಕುಟುಂಬವು ವಿಜಯಕುಮಾರ ದುಡಿಮೆಯ ಮೇಲೆಯೇ ಅವಲಂಬಿತವಾಗಿತ್ತು. ವಿಜಯ ಸಾವು ಕುಟುಂಬಕ್ಕೆ ಸಮಸ್ಯೆಗಳ ಸುಳಿಗೆ ತಳ್ಳಿದೆ.
ಮೃತ ವಿಜಯಕುಮಾರ ಪ್ರಸನ್ನ ವಾಹನ ಚಾಲಕರಾಗಿ ಕುವೈತನಲ್ಲಿ 2015ರಲ್ಲಿ ಮೊದಲು ಬಾರಿಗೆ ಕೆಲಸಕ್ಕೆ ಹೋಗಿದ್ದನು. ಕೋವಿಡ್ ವೇಳೆ ಸ್ವಗ್ರಾಮ ಸರಸಂಬಾಕ್ಕೆ ವಾಪಸ್ ಆಗಿದ್ದು, ಮತ್ತೆ 2022ರಲ್ಲಿ ಕುವೈತ್ಗೆ ಹೋಗಿದ್ದು, ಅಲ್ಲಿ ವಾಹನ ಚಾಲನೆಗೆ 35 ಸಾವಿರ ಸಂಬಳದಲ್ಲಿ ದುಡಿಯುತ್ತಿದ್ದರು. 2025ರ ಜೂನ್11ಕ್ಕೆ ಅವರ ಗುತ್ತಿಗೆ ಅವಧಿ ಮುಗಿಯುತ್ತಿತ್ತು. ಆದರೆ, ವಿಧಿಯ ಅಟಹಾಸವೆನ್ನುವಂತೆ 2024 ರ ಜೂನ್ 12ರಂದು ಆತನ ಸಾವು ಸಂಭವಿಸಿದೆ.