ಕನ್ನಡಪ್ರಭ ವಾರ್ತೆ ಮೈಸೂರುಕಳೆದ 30 ವರ್ಷಗಳಿಂದ ಹಂಚ್ಯಾ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಬಸವರಾಜು ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ಕಾಂಗ್ರೆಸ್ ಮುಖಂಡ ಕೆ. ಸಣ್ಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಸಿ. ಕುಮಾರಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಸದಸ್ಯ ಎಚ್.ಡಿ. ಚೆನ್ನಯ್ಯ ಮಾತನಾಡಿದರು.ಗ್ರಾಪಂ ಮಾಜಿ ಸದಸ್ಯ ಸಿ. ಬಸವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಮೇಲ್ವಿಚಾರಕ ಗಿರೀಶ್, ಹಂಚ್ಯಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೋಗಿ ಸಿದ್ದಯ್ಯ, ನಿರ್ದೇಶಕರಾದ ಎಸ್. ಕುಮಾರ್, ಎಚ್.ವಿ. ವೆಂಕಟೇಗೌಡ, ಸಾತಗಳ್ಳಿ ನಂಜಪ್ಪ, ಎಚ್.ಎಸ್. ಸ್ವಾಮಿಗೌಡ, ಶಂಕರಪ್ಪ, ಗಳಿಗರಹುಂಡಿ ಮಹದೇವ್, ಪಿ. ಲಕ್ಷ್ಮೀ ನಾರಾಯಣಚಾರಿ, ಗೌರಮ್ಮ, ಕಮಲಮ್ಮ, ಕಾಳಿಸಿದ್ದನಹುಂಡಿ ಮಹದೇವು, ರಮ್ಮನಹಳ್ಳಿ ಹಾಲಪ್ಪ, ಮುಖಂಡರಾದ ಯೋಗೀಶ್, ಸಹ ಕಾರ್ಯದರ್ಶಿ ನಾಗರಾಜ್, ಹೆಚ್ಚುವರಿ ಉಸ್ತುವಾರಿ ಶಿವಪ್ರಕಾಶ್ ಮೊದಲಾದವರು ಇದ್ದರು.