ಕುಶಾಲನಗರ: ಭಾರತೀಯ ಸೇನೆಯ ಅಗ್ನಿವೀರ್ ಗೆ ಕುಶಾಲನಗರದಲ್ಲಿ ತರಬೇತಿಗೊಂಡು ಆಯ್ಕೆಯಾದ ಏಳು ಮಂದಿ ಯುವಕರನ್ನು ಬುಧವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಿವೃತ್ತ ಹವಾಲ್ದಾರ್ ಅಮೆ ಜನಾರ್ದನ್ ಅವರ ನೇತೃತ್ವದಲ್ಲಿ ತರಬೇತು ಪಡೆದು ದೇಶದ ವಿವಿಧ ಸೇನಾ ವಿಭಾಗಗಳಿಗೆ ಆಯ್ಕೆಯಾದ ಬಿ.ಎಲ್. ಕುಶಾಲ್, ಯು.ಎ. ಸಚಿನ್, ಸಿ.ವಿ. ಮಿಥುನ್, ಬಿ.ಎಲ್. ಮನಸ್ವಿನ್, ಎನ್.ಎಂ. ಅಜಿತ್, ಸೂರಜ್ ಮತ್ತು ನವೀನ್ ಅವರು ಜೂ. 25ರಂದು ಭಾರತೀಯ ಸೇನೆಗೆ ಸೇರ್ಪಡೆಯಾಗಲಿದ್ದಾರೆ. ಕಳೆದ ಹಲವು ವರ್ಷಗಳಿಂದ 225ಕ್ಕೂ ಅಧಿಕ ಯುವಕರನ್ನು ತರಬೇತಿಗೊಳಿಸಿ ಸೇನೆಯ ಆಯ್ಕೆಗೆ ಸಜ್ಜುಗೊಳಿಸಿರುವ ಸಾಧನೆ ನಿವೃತ್ತ ಹವಾಲ್ದಾರ್ ಅಮೆ ಜನಾರ್ಧನ್ ಅವರದು.
ಈಗಾಗಲೇ ಸೇನಾ ವಿಭಾಗದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವ ಕುಶಾಲನಗರದ ರಾಹುಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.