ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಜೀಗುಂಡಿಪಟ್ಟಣ ಗ್ರಾಮದಲ್ಲಿ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯು ನಬಾರ್ಡ್ ಮತ್ತು ವಿಕಸನ ಸಂಸ್ಥೆ ಸಹಕಾರದಲ್ಲಿ ಆರಂಭಿಸಿದ ಕಿರೇಮಡಿ ಬೀಜ ಭಂಡಾರ ಪ್ರಾರಂಭೋತ್ಸವ ಹಾಗೂ ಷೇರುದಾರರ ಜಾಗೃತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಲ್ಲಿ ಜನರಿಗೆ ಗುಣಮಟ್ಟದ ಬೆಲ್ಲ ನೀಡುತ್ತಿದೆ. ಕೇವಲ 1000 ರು.ಗಳನ್ನು ಕೊಟ್ಟು ಸದಸ್ಯತ್ವ ಪಡೆಯುವುದು ಮುಖ್ಯವಲ್ಲ. ಆ ಸದಸ್ಯತ್ವದ ಹಣ ಬೆಳೆಯಬೇಕಾದರೆ ಕಂಪನಿಯು ತಯಾರಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಉತ್ಪನ್ನಗಳನ್ನು ಕೊಂಡು ಬಳಕೆ ಮಾಡಿದಾಗ ಮಾತ್ರ ಕಂಪನಿ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದರು.ಜಾಗತಿಕ ಮಾರುಕಟ್ಟೆಗೆ ಸವಾಲಾಗಿ ಆರಂಭಗೊಂಡಿದ್ದೆ ರೈತ ಉತ್ಪಾದಕ ಕಂಪನಿಗಳು. ಕಂಪನಿಯ ಕಾಯ್ದೆ ಅಡಿ ಷೇರುದಾರರೆ ಇದರ ಮಾಲೀಕರು. ಆ ಮಾಲೀಕರೇ ಕಂಪನಿಯ ಗ್ರಾಹಕರಾದಾಗ ಮಾತ್ರ ಕಂಪನಿಗಳು ಬಹುಕಾಲ ಯಶಸ್ವಿಯಾಗುತ್ತವೆ ಎಂದರು.
ಬಂದಿಗೌಡ ಬಡಾವಣೆಯ ಎಸ್ಬಿಐ ಬ್ಯಾಂಕ್ನ ಕೃಷಿ ಮತ್ತು ವಾಣಿಜ್ಯ ಶಾಖೆ ವ್ಯವಸ್ಥಾಪಕ ಸುರೇಶ್ ಮಾತನಾಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಿಎಂಎಫ್ಎಂಇ ಯೋಜನೆಗಳ ಮಹತ್ವ ಹಾಗೂ ರೈತ ಬಾಂಧವರಿಗೆ ಇದರಿಂದ ಆಗುವ ಪ್ರಯೋಜನ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕರಾದ ಸುಮನ ಕೆರಗೋಡು, ಕೆರಗೋಡು ಹೋಬಳಿಯ ಕೃಷಿ ಅಧಿಕಾರಿ ದೇವರಾಜ್ ಗೌಡ, ಎಪಿಎಂಸಿ ಮಾಜಿ ನಿರ್ದೇಶಕರಾದ ಕೀಲಾರ ಕೆ.ಟಿ.ವೀರಪ್ಪ, ಆಡಳಿತ ಮಂಡಳಿ ನಿರ್ದೇಶಕರಾದ ಹಳುವಾಡಿ ಕೃಷ್ಣ, ತಮ್ಮಯ್ಯ, ಮಾರಸಿಂಗನಹಳ್ಳಿ ಪಾಪಣ್ಣ, ಧನಂಜಯ ಪಣಕನಹಳ್ಳಿ, ಮಂಗಲ ಪ್ರಕಾಶ್, ಹೊಳಲು ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.