)
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ಕದ್ದು ಮುಚ್ಚಿ ನೀರು ಹರಿಸುತ್ತಿದೆ. ಇದರಿಂದಾಗಿ ಒಂದು ಬೆಳೆಗೂ ನೀರು ಸಿಗಲಾರದು ಎಂಬ ಆತಂಕ ರೈತರಲ್ಲಿ ಸೃಷ್ಟಿಯಾಗಿದೆ.
ಪ್ರಸ್ತುತ ಕೆಆರ್ಎಸ್ನಲ್ಲಿ 109.75 ಅಡಿ ನೀರಿದ್ದು, ಒಳಹರಿವು 2274 ಕ್ಯೂಸೆಕ್ ಆಗಿದೆ. ಜಲಾಶಯದಿಂದ 3165 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನದಿಯಂಚಿನ ದಡಗಳು ಮುಳುಗಡೆಯಾಗಿರುವುದು ಕೆಆರ್ಎಸ್ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿಸುತ್ತಿರುವುದಕ್ಕೆ ಸಾಕ್ಷಿ ಎಂದು ರೈತರು ಆರೋಪ ಮಾಡಿದ್ದಾರೆ. ಕಬಿನಿ ನೀರಿನ ಮಟ್ಟ ಇಳಿಮುಖ:ಕಳೆದೆರಡು ದಿನಗಳಿಂದ ಕೇರಳದಲ್ಲಿ ಮಳೆ ಕ್ಷೀಣವಾಗಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿಯೂ ನೀರು ಇಳಿಮುಖವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಶನಿವಾರ ಜಲಾಶಯದ ನೀರಿನ ಮಟ್ಟ 2281.63 ಇತ್ತು. ಭಾನುವಾರ 2280.89 ಆಗಿದೆ. ಶನಿವಾರ 8701 ಕ್ಯುಸೆಕ್ನಷ್ಟಿದ್ದ ಒಳ ಹರಿವು ಭಾನುವಾರ 8559 ಕ್ಯುಸೆಕ್ನಷ್ಟಾಗಿದೆ. ಹೊರಹರಿವು 13600 ಕ್ಯುಸೆಕ್ ನಷ್ಟಿತ್ತು.ಕಾವೇರಿ: ಇಂದು ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ:
ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ತಮಿಳುನಾಡು ಕಾಂಗ್ರೆಸ್ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ವಿಷಯದಲ್ಲಿ ನಮ್ಮ ನಿಲುವು ಬದಲಾಗದು ಎಂದು ಅದರ ಅಧ್ಯಕ್ಷ ಮಾಣಿಕ್ಯಂ ಟಾಗೋರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಿಂದ ಪಕ್ಷಾತೀತವಾಗಿ ಬರುತ್ತಿರುವ ಒತ್ತಡದ ಹೊರತಾಗಿಯೂ ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಪರವಾನಗಿ ನೀಡಬಾರದು. ಒಂದೊಮ್ಮೆ ಕೊಟ್ಟಲ್ಲಿ, ನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ತಮಿಳುನಾಡು ಒಗ್ಗಟ್ಟಾಗಿ ನಿಂತು, ತನ್ನ ನೀರಿನ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟ್ನಲ್ಲಿ ಕಾನೂನುಬದ್ಧ ಪರಿಹಾರ ಕಂಡುಕೊಳ್ಳಬೇಕು’ ಎಂದರು. ಜತೆಗೆ, ಈ ವಿಷಯವಾಗಿ ಧ್ವನಿಯೆತ್ತದ ಪಿಎಂಕೆ, ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿದರು.