ನಾಗರ ಪಂಚಮಿಯಲ್ಲಿ ಉಂಡಿಗಳಿಗೆ ಭರ್ಜರಿ ಬೇಡಿಕೆ

KannadaprabhaNewsNetwork |  
Published : Aug 17, 2026, 02:30 AM IST
16ಎಚ್‌ಯುಬಿ27 | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಊಂಡಿಗಳು ಮಾರಾಟಕ್ಕೆ ಲಭ್ಯ

ನವಲಗುಂದ: ತಾಲೂಕಿನಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಹಬ್ಬದ ಸಾಂಪ್ರದಾಯಿಕ ತಿನಿಸಾದ ಉಂಡಿಗಳಿಗೆ ಈ ಬಾರಿ ಭರ್ಜರಿ ಬೇಡಿಕೆ ಕಂಡುಬಂದಿದೆ.

ಹಬ್ಬದ ಹಿನ್ನೆಲೆಯಲ್ಲಿ ನಗರದ ಹಾಗೂ ಗ್ರಾಮೀಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಊಂಡಿಗಳು ಮಾರಾಟಕ್ಕೆ ಲಭ್ಯವಾಗಿದ್ದು, ಗ್ರಾಹಕರು ಆಸಕ್ತಿಯಿಂದ ಖರೀದಿಸುತ್ತಿದ್ದಾರೆ.

ನಾಗರ ಪಂಚಮಿಯ ಅಂಗವಾಗಿ ಮನೆಮನೆಗಳಲ್ಲಿ ಸಾಂಪ್ರದಾಯಿಕವಾಗಿ ವಿವಿಧ ರೀತಿಯ ಊಂಡಿಗಳನ್ನು ತಯಾರಿಸಲಾಗಿದೆ. ಎಳ್ಳು, ಬೆಲ್ಲ, ಕಡಲೆಕಾಯಿ, ಕೊಬ್ಬರಿ, ಶೇಂಗಾ, ಲಡಕಿ, ರವೆ ಸೇರಿದಂತೆ ವಿವಿಧ ವಿಶಿಷ್ಟ ರುಚಿ ಮತ್ತು ಪರಿಮಳದಿಂದ ಕೂಡಿರುವ ಉಂಡಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಹಬ್ಬದ ದಿನದಂದು ಕುಟುಂಬ ಸದಸ್ಯರು ಒಟ್ಟಾಗಿ ಉಂಡಿಗಳನ್ನು ತಯಾರಿಸಿ ಸವಿಯುವುದು ಸಂಪ್ರದಾಯದ ಪ್ರಮುಖ ಭಾಗವಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿಯೂ ಊಂಡಿಗಳ ತಯಾರಿ ಮತ್ತು ಮಾರಾಟ ಜೋರಾಗಿದೆ. ಮನೆಗಳಲ್ಲಿ ತಯಾರಿಸಲು ಸಮಯದ ಅಭಾವವಿರುವವರು ಅಂಗಡಿಗಳಿಂದ ಸಿದ್ಧ ಉಂಡಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಸಣ್ಣ ವ್ಯಾಪಾರಿಗಳು, ಗೃಹೋದ್ಯಮ ನಡೆಸುವವರಿಗೆ ಉತ್ತಮ ವ್ಯಾಪಾರ ನಡೆಯುತ್ತಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿಯ ಜೋಕಾಲಿ ಆಟವೂ ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಮಕ್ಕಳು ಹಾಗೂ ಯುವಕರು ಜೋಕಾಲಿಯಲ್ಲಿ ಆಟವಾಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ