- ಬಂಗಾರಪ್ಪ ಸರ್ಕಾರದಂತೆ ಸುಗ್ರೀವಾಜ್ಞೆ ಹೊರಡಿಸಿ: ಮಂಡಲೂರು ವಿಶ್ವನಾಥ ಒತ್ತಾಯ - - -
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ರೈತರು ನಂತರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಆಡಳಿತ ಯಂತ್ರದ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.ಮಂಡಲೂರು ವಿಶ್ವನಾಥ ಮಾತನಾಡಿ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯು ನಿರ್ಧಾರವನ್ನು ಸಾರಾಸಗಟಾಗಿ, ತಿರಸ್ಕರಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಹಿಂದೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರಂತೆ ದಿಟ್ಟ ಕ್ರಮ ಕೈಗೊಳ್ಳಬೇಕು. ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದರು.
ಸಂಘದ ಎಸ್.ಜೆ.ಕಲ್ಲೇಶ, ಗುಡಾಳ್ ಡಿ.ಕೆ.ವೆಂಕಟೇಶ, ಜಿ.ಎಸ್.ಹಾಲೇಶ, ಮಲಲಿಕಾರ್ಜುನ, ಕಡ್ಲೇಬಾಳು ಚಂದ್ರಶೇಖರ, ಡಿ.ದಿನೇಶ, ರಾಜಣ್ಣ, ನಾಗನೂರು ಡಿ.ವೀರಣ್ಣ, ಕೋಡಿಹಳ್ಳಿ ರಾಜಣ್ಣ, ಸಿದ್ದನೂರು ರಮೇಶ, ಸಿದ್ದನೂರು ಮಂಜಣ್ಣ, ಅತ್ತಿಗೆರೆ ಮಹೇಶ, ನಾಗಣ್ಣ ಇತರರು ಇದ್ದರು.
(ಕೋಟ್) ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್ಸಿ ಮತ್ತು ಸಿಬ್ಲ್ಯುಎಂಸಿ ಆದೇಶ ಮಾಡಿವೆ. ಯಾವುದೇ ಕಾರಣಕ್ಕೂ ಇಂತಹ ಆದೇಶವನ್ನು ರಾಜ್ಯ ಸರ್ಕಾರ ಒಪ್ಪಬಾರದು. ರಾಜ್ಯದ ರೈತರು, ಜನರ ಹಿತದೃಷ್ಟಿಯಿಂದ ಹಿಂದೆ ಎಸ್.ಬಂಗಾರಪ್ಪ ನೇತೃತ್ವದ ಸರ್ಕಾರದ ಕೈಗೊಂಡ ಕ್ರಮದಂತೆ ಈಗಿನ ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ.
- - -