)
ಹತ್ತಾರು ದಿನಗಳಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಕಾರ್ಯ ಶೂನ್ಯ
ಮುಂಗಾರು ಮಳೆ ವಿಫಲವಾಗಿದ್ದರಿಂದ ರೈತರ ಪರಿಸ್ಥಿತಿ ಬಹಳ ಕಷ್ಟಕರವಾಗಲಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ಅವರು ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಂಗಾರು ಪೂರ್ಣ ವಿಫಲವಾಗಿದೆ. ವಿವಿಧ ಇಲಾಖೆ ಗಳಲ್ಲಿ ಮಳೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಹತ್ತಾರು ದಿನಗಳಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಕಾರ್ಯ ಶೂನ್ಯಕ್ಕೆ ಇಳಿಯುವುದು ಖಚಿತ. ನಾನು ಶಾಸಕನಾಗಿದ್ದಾಗಳೂ ಭೀಕರ ಬರಗಾಲ ಕಡೂರನ್ನು ಕಾಡಿತ್ತು. ಆಗ ನನ್ನ ಇತಿಮಿತಿಯಲ್ಲಿ ಜನರಿಗೆ ಸ್ಪಂದಿಸಿದ್ದೆ. ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿ ವಿವರಿಸಿ ಬರಪೀಡಿತ ಎಂದು ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೆ ಎಂದರು.ಈಗ ಬರ ಬಾಗಿಲು ತಟ್ಟುತ್ತಿರುವಾಗ ವಾಸ್ತವ ಪರಿಸ್ಥಿತಿ ಅರಿಯುವುದು ನಮ್ಮ ಕರ್ತವ್ಯ. ನಮ್ಮ ಪಕ್ಷ ಸಹ ಇಡೀ ರಾಜ್ಯದ ಬರ ಪರಿಸ್ಥಿತಿ ಅದ್ಯಯನ ಮಾಡಿ ವರದಿ ನೀಡಲು ಪ್ರಾದೇಶವಾರು ಉಸ್ತುವಾರಿ ನೇಮಿಸಿದೆ. ಕಡೂರು ಕ್ಷೇತ್ರಕ್ಕೆ ನನ್ನನ್ನು ನೇಮಿಸಿದೆ. ಇದೇ 17 ರಿಂದ ಹೋಬಳಿವಾರು ಗ್ರಾಮಗಳ ಭೇಟಿ ಮಾಡಲಿದ್ದು 17- ಬೀರೂರು, 18-ಯಗಟಿ,ಚೌಳಹಿರಿಯೂರು, ಹಿರೇನಲ್ಲೂರು,19 ರಂದು ಸಿಂಗಟಗೆರೆ, ಕಡೂರು ಕಸಬಾ ಹೋಬಳಿ ಪ್ರದೇಶಗಳ ವರದಿ ತಯಾರಿಸಿ ಪಕ್ಷ ಮತ್ತು ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಲಿದ್ದೇನೆ.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಬರಪೀಡಿತ ಎಂದು ಘೋಷಿಸ ಬೇಕು. ಅದರೆ ಕಡೂರು ತಾಲೂಕಿನಲ್ಲಿ ಮಳೆ ಪ್ರಮಾಣ ಸರಾಸರಿ ಲೆಕ್ಕ ಹಾಕಿದರೆ ಕಡೂರಿಗೆ ಖಂಡಿತ ದೊಡ್ಡ ನಷ್ಟ. ಏಕೆಂದರೆ 2 ಹೋಬಳಿಗಳಲ್ಲಿ ಮಳೆ ಉತ್ತಮವಾಗಿದೆ. ಉಳಿದೆಡೆಗಳಲ್ಲಿ ಮಳೆಯೇ ಇಲ್ಲ. ಸರಾಸರಿ ಮಳೆ ಪ್ರಮಾಣದಿಂದ ಉತ್ತಮ ಮಳೆಯಾಗಿದೆ ಎಂಬ ವರದಿ ಬರುತ್ತದೆ. ಇದು ಪ್ರಮುಖ ಲೋಪ. ಹಾಗಾಗಿ ಬರದ ಪ್ರಮಾಣವನ್ನು ಹೋಬಳಿ ವಾರು ಲೆಕ್ಕ ಹಾಕಿದರೆ ಬರಗಾಲ ಪೀಡಿತ ಪ್ರದೇಶಕ್ಕೆ ನ್ಯಾಯವಾಗಿ ಸಿಗಬೇಕಾದ ಪರಿಹಾರ ದೊರೆಯಲು ಸಹಕಾರಿಯಾಗುತ್ತದೆ ಎಂದರು.
ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಸಹೋದರಿ ವಿಜಯಲಕ್ಷ್ಮಿ ನಿಧನರಾಗಿ ಒಂಭತ್ತು ವರ್ಷ ಕಳೆದಿದೆ. ಅಪಾರ ಪುಸ್ತಕ ಪ್ರೇಮಿಯಾಗಿದ್ದ ಅವರ ನೆನಪಿನಲ್ಲಿ ಪ್ರತೀವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯ ಪರಿಕರ ನೀಡುವ ಪರಿಪಾಠ ದಂತೆ ಈ ಬಾರಿ ಎಮ್ಮೆದೊಡ್ಡಿ ಮುಸ್ಲಾಪುರದ ಹಟ್ಟಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ವಿತರಿಸಲಾಗುತ್ತದೆ ಎಂದು ದತ್ತ ತಿಳಿಸಿದರು.
-- ಬಾಕ್ಸ್ ಸುದ್ದಿಗೆ----
14ಕೆಕೆಡಿಯು5.ವೈ.ಎಸ್ ವಿ ದತ್ತ.