ಕನ್ನಡಪ್ರಭ ವಾರ್ತೆ ಶಿರಾ
ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾಪುರ ಗ್ರಾಮದಲ್ಲಿ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಆರ್ಥಿಕವಾಗಿ ಸಬಲರಾಗಬೇಕು ಕೇವಲ ಕೃಷಿಯನ್ನು ಮಾತ್ರ ಹೊಂದಿ ಆ ಮೂಲಕ ಅಭಿವೃದ್ಧಿ ಹೊಂದಲು ಕಷ್ಟ ಸಾಧ್ಯ ಆದ್ದರಿಂದ ಕೃಷಿಯ ಜೊತೆಗೆ ಹೈನುಗಾರಿಕೆ ಕುರಿ ಸಾಕಣೆ ಮೇಕೆ ಸಾಕಣೆ ಮೀನುಗಾರಿಕೆ ಎಂತಹ ಹೊಸ ಕಸಬುಗಳನ್ನು ರೂಡಿಸಿಕೊಳ್ಳಬೇಕು. ರೈತರಿಗೆ ಕೂಲಿ ಕಾರ್ಮಿಕರಿಗೆ ನೀಡುವ ಸಾಲವನ್ನು ಎಲ್ಲರು ಸಹ ಸದ್ವಿನಿಯೋಗ ಪಡಿಸಿಕೊಳ್ಳಬೇಕು. ತಮಗೆ ಸಿಕ್ಕ ಅವಕಾಶಗಳನ್ನು ಸಾಲ ಸೌಲಭ್ಯಗಳನ್ನು ಸೂಕ್ತ ವಿಧಾನದಿಂದ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವ ಕಡೆ ಗಮನ ಹರಿಸಬೇಕು. ಹಣವನ್ನು ಖರ್ಚು ಮಾಡಿ ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನ ಚಿಕ್ಕನಾಯಕನಹಳ್ಳಿ ಭಾಗದ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ ಮಾತನಾಡಿ ಕೆ ಎನ್ ರಾಜಣ್ಣನವರು ಅಲ್ಪಸಂಖ್ಯಾತರ ಬಡವರ್ಗದವರ ಎಲ್ಲಾ ಜಾತಿ ಜನಾಂಗದವರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು ಈ ಭಾಗದ ರೈತರ ಕಷ್ಟಗಳನ್ನು ಅರಿತಿರುವುದರಿಂದ ಅವರಿಗೆ ರೈತರಿಗೆ ಸಹಾಯ ಮಾಡುವ ಮನಸ್ಸು ಬಂದಿದೆ ಎಂದು ತಿಳಿಸಿದರು.ಬುಕ್ಕಾಪಟ್ಟಣ ವಿ ಆರ್ ಎಮ್ ಸತ್ಯನಾರಾಯಣರವರು ಮಾತನಾಡಿ ಕೇವಲ ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಕೆಎನ್ ರಾಜಣ್ಣನವರು ಸಹಾಯ ಮಾಡುತ್ತಿಲ್ಲ ಅವರು ಶಿರಾ ಭಾಗದ ಅದರಲ್ಲಿಯೂ ಬುಕ್ಕಾಪಟ್ಟಣ ಭಾಗದ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದರು.