ಕನ್ನಡಪ್ರಭ ವಾರ್ತೆ ಅರಕಲಗೂಡು
ಇದೀಗ ಕೆಲ ದಿನಗಳಿಂದ ಮಳೆ ಇಲ್ಲದ ಕಾರಣ ರೈತರು ಜಮೀನುಗಳತ್ತ ಮುಖ ಮಾಡಿದ್ದು ಹೊಗೆಸೊಪ್ಪು ಗಿಡಗಳಿಗೆ ರಸಗೊಬ್ಬರ ನೀಡಿ ಕಳೆ ತೆಗೆಯುತ್ತಿದ್ದಾರೆ. ಕೆಲವು ಕಡೆ ಮಳೆಯಿಂದಾಗಿ ಗಿಡಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪಡಣೆ ಮಾಡಿ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ನಿರತರಾಗಿದ್ದಾರೆ.ಆಲೂ ಬಿತ್ತನೆ ಕುಸಿತ:
ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಅಧಿಕವಾಗಿ ಸುರಿದ ಪರಿಣಾಮ ಆಲೂಗಡ್ಡೆ ಬಿತ್ತನೆ ಪ್ರಮಾಣ ಕುಸಿದಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 800 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕಾರಣ ಸದ್ಯಕ್ಕೆ 350 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಭಾರಿ ಮಳೆ ಪರಿಣಾಮ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆಯಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ 19700 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಗುರಿ ಹೊಂದಲಾಗಿದ್ದು ಸದ್ಯಕ್ಕೆ 11150 ಹೆಕ್ಟೇರ್ ಬಿತ್ತನೆಯಾಗಿದೆ. 35700 ಹೆಕ್ಟೇರ್ ಗುರಿ ಹೊಂದಲಾಗಿದ್ದ ಏಕದಳ ಧಾನ್ಯ ಬೆಳೆಗಳನ್ನೂ ಸಹ 11150 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. 1575 ಹೆಕ್ಟೇರ್ನಲ್ಲಿ ಬಿತ್ತನೆಯಾಗಬೇಕಿದ್ದು ದ್ವಿದಳ ಧಾನ್ಯ ಬೆಳೆಗಳನ್ನು 655 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಇನ್ನುಳಿದಂತೆ ಉದ್ದು ಆಲಸಂದೆ, ಹೆಸರು 700 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಮುಂಗಾರು ಪೂರ್ವ ಮಳೆ ಅಬ್ಬರದಿಂದಾಗಿ ಬಹುತೇಕ ಬಿತ್ತನೆಯಾದ ಉದ್ದು ಹೆಸರು ಆಲಂಸದೆ ನೆಲ ಬಿಟ್ಟು ಮೇಲೇಳದೆ ಕೊಳೆತು ನಾಶವಾಗಿದೆ. ಸಾಕಷ್ಟು ಭಾಗದಲ್ಲಿ ಬಿತ್ತನೆ ಬೀಜ ಮೊಳಕೆಯೊಡೆಯದೆ ಮಣ್ಣುಪಾಲಾಗಿದೆ.ಹೇಳಿಕೆ1ಮುಂಗಾರು ಪೂರ್ವ ಮಳೆ ಅತಿಯಾಗಿ ಸುರಿದ ಪರಿಣಾಮ ನಾಟಿ ಮಾಡಿದ ತಂಬಾಕು ಗಿಡಗಳಿಗೆ ತೇವಾಂಶ ಹೆಚ್ಚಿ ನೆಲಕಚ್ಚಿತು. ಮಳೆಯಾಶ್ರಿತ ಹೊಲದಲ್ಲಿ ಬೆಳೆದ ಗಿಡಗಳಿಗೆ ಈಗ ರಸಗೊಬ್ಬರ ನೀಡಿ ಕಳೆ ತೆಗೆದು ಆರೈಕೆ ಮಾಡಲಾಗಿದೆ.
ಕುಮಾರ್, ರೈತ (10ಎಚ್ಎಸ್ಎನ್8ಎ )ಹೇಳಿಕೆ2
ಮುಂಗಾರು ಪೂರ್ವ ಮಳೆ ಈ ಬಾರಿ ವಾಡಿಕೆಗಿಂತ ಅಧಿಕವಾಗಿ ಸುರಿದಿದೆ. 4800 ಹೆಕ್ಟೇರ್ ಗುರಿ ಬದಲಿಗೆ 6200 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ಮಾಡಿಲಾಗಿದೆ. ಮಳೆಯಿಂದ ಶೀತಾಂಶ ಹೆಚ್ಚಿ ಶೇ. 10ರಷ್ಟು ಹೊಗಸೊಪ್ಪು ಗಿಡಗಳಿಗೆ ಹಾನಿಯಾಗಿದೆ. - ಕವಿತಾ, ತಾ.ಸಹಾಯಕ ಕೃಷಿ ನಿರ್ದೇಶಕಿ, ಅರಕಲಗೂಡು (10ಎಚ್ಎಸ್ಎನ್8ಬಿ)ಹೇಳಿಕೆ 3ಆಲೂಗಡ್ಡೆ ಬಿತ್ತನೆ ಹಂಗಾಮಿನಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ಮಳೆಯಾದ ಕಾರಣ ಬಿತ್ತನೆಗೆ ತೊಡಕಾಗಿದೆ. ಹೀಗಾಗಿ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಮಳೆಯಿಂದಾಗಿ ಆಲೂಗಡ್ಡೆ ಬಿತ್ತನೆ ಬದಲಿಗೆ ರೈತರು ಮುಸುಕಿನ ಜೋಳ ಮತ್ತಿತರ ಬೆಳೆಗಳ ಬಿತ್ತನೆ ಮಾಡಿದ್ದಾರೆ. - ರಾಜೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಅರಕಲಗೂಡು (10ಎಚ್ಎಸ್ಎನ್8ಸಿ)