ವಿ.ಎಂ. ನಾಗಭೂಷಣ
ಖರೀದಿದಾರರು ಬರುತ್ತಿಲ್ಲ:
ದೌಲತ್ಪುರದ ರೈತ ಮುಖಂಡ ವಿ.ಜೆ. ಶ್ರೀಪಾದಸ್ವಾಮಿ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಒಂದು ಎಕರೆ ಪ್ರದೇಶದಲ್ಲಿ ಅಡಿಕೆಯೊಂದಿಗೆ ಬಾಳೆ ಬೆಳೆದಿದ್ದೇನೆ. ಬಾಳೆ ಕೃಷಿಗೆ ಒಂದು ಎಕರೆಗೆ ₹೬೦-೭೦ ಸಾವಿರ ಖರ್ಚು ಬರುತ್ತದೆ. ಈಗ ಉತ್ತಮ ಇಳುವರಿ ಬಂದಿದೆ. ಲಾಭದ ನಿರೀಕ್ಷೆಯಲ್ಲಿದ್ದೆವು. ಅದರೆ, ಬಾಳೆ ದರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬಾಳೆ ಬೆಳೆಯನ್ನು ಖರೀದಿಸಲು ಖರೀದಿದಾರರು ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಡಜನ್ ಬಾಳೆ ಹಣ್ಣು ₹೫೦ರಿಂದ ೬೦ರಂತೆ ಮಾರಾಟವಾಗುತ್ತಿದೆ. ದರ ಕುಸಿತದಿಂದ ಕಂಗಾಲಾಗಿರುವ ನಾವು ನಾವು ಕೆಜಿ ಬಾಳೆಯನ್ನು ₹೪-೫ ರಂತೆ ಕೊಡುತ್ತೇವೆ ಎಂದರೂ ಬಾಳೆಯನ್ನು ಖರೀದಿಸಲು ಖರೀದಿದಾರರು ಬರುತ್ತಿಲ್ಲ. ಕಾರಣ ತಿಳಿಯುತ್ತಿಲ್ಲ. ಕೆಜಿ ಬಾಳೆಗೆ ₹೧೦-೧೫ ದೊರೆತರೆ ರೈತರು ಲಾಭವನ್ನು ಕಾಣಬಹುದು. ಈಗಿರುವ ದರಕ್ಕೆ ಮಾರಾಟ ಮಾಡಿದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.ಆಂಧ್ರದಿಂದ ಬರುವ ಬಾಳೆ:
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ೬೦೦-೭೦೦ ಹೆಕ್ಟೇರ್ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯಲಾಗುತ್ತದೆ. ನರೇಗಾ ಯೋಜನೆ ಮತ್ತು ಹನಿ ನೀರಾವರಿಗೆ ಸಬ್ಸಿಡಿ ನೀಡುತ್ತಿದ್ದುದರಿಂದ ವರ್ಷದಿಂದ ವರ್ಷಕ್ಕೆ ಬಾಳೆ ಕೃಷಿಯ ಪ್ರದೇಶ ಹೆಚ್ಚಾಗಿದೆ. ಈ ಹಿಂದೆ ಚಿತ್ರದುರ್ಗ, ಬೆಂಗಳೂರು, ಹೊಸಪೇಟೆ ಮುಂತಾದೆಡೆಯಿಂದ ಕೆಲವೊಮ್ಮೆ ಬೇರೆ ರಾಜ್ಯಗಳಿಂದಲೂ ಬಾಳೆ ಖರೀದಿಗೆ ಖರೀದಿದಾರರು ಬರುತ್ತಿದ್ದರು. ಈ ಬಾರಿ ಖರೀದಿದಾರರು ಬರುವುದು ಸ್ವಲ್ಪ ಕಡಿಮೆಯಾಗಿದೆ. ಪೂರೈಕೆ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದರು.