ತಂದೆ, ಮಗನಿಗೆ ಕಚ್ಚಿದ ಬೀದಿನಾಯಿ

KannadaprabhaNewsNetwork |  
Published : Nov 06, 2024, 12:50 AM IST

ಸಾರಾಂಶ

Father and son were bitten by a street dog

ಚಳ್ಳಕೆರೆ: ಇಲ್ಲಿಯ ಕಾಟಪ್ಪನಹಟ್ಟಿಯ ಗೊಲ್ಲರಹಟ್ಟಿಯಲ್ಲಿ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಮಗುವನ್ನು ರಕ್ಷಿಸಲು ಬಂದ ತಂದೆ ಮೇಲೂ ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.೩ ವರ್ಷದ ಸಿಂಪು ಹೆಸರಿನ ಮಗು, ತಂದೆ ಮಂಜುನಾಥ (33) ಗಾಯಗೊಂಡವರು. ಸಿಂಪು ಕೈಗೆ ಬೀದಿನಾಯಿ ಬಾಯಿಹಾಕಿ, ಕೈಯ ಮಾಂಸ ಕಿತ್ತಿದೆ. ಮಗು ಅಳುವುದನ್ನು ಕಂಡು ರಕ್ಷಣೆಗೆಂದು ತಂದೆ ಮಂಜುನಾಥ ಧಾವಿಸಿದ್ದಾರೆ. ನಾಯಿಯು ಅವರ ಮೇಲೂ ದಾಳಿ ನಡೆಸಿದೆ. ಎರಡ್ಮೂರು ಕಡೆ ಕಚ್ಚಿ ಗಾಯಗೊಳಿಸಿದೆ. ಹಳೇ ಟೌನ್‌ನ ತೇರು ಬೀದಿಯಲ್ಲಿ ಬೀದಿನಾಯಿಯೊಂದು ಸಿಕ್ಕಿ ಸಿಕ್ಕ ಜನರನ್ನು ಕಚ್ಚುತ್ತಿದ್ದು, ಅದನ್ನು ಕಂಡ ಸ್ಥಳೀಯರು ನಾಯಿಯನ್ನು ದೊಣ್ಣೆಯಿಂದ ಹೊಡೆದು ಓಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ