- ಕಾಂಗ್ರೆಸ್ ಮುಖಂಡರಾಗಿ ಗುಟ್ಕಾ ದಂಧೆ: ಯಶವಂತ ರಾವ್ ಆರೋಪ
ಲೋಕಸಭೆ ಚುನಾವಣೆ ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ಮುಖಂಡರು ಕೀಳುಮಟ್ಟದ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಅಭಿವೃದ್ಧಿ ವಿಚಾರಕ್ಕೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಸವಾಲು ಹಾಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯವೇ ಬೇರೆ, ವೃತ್ತಿಯೇ ಬೇರೆ. ಆದರೂ, ವೃತ್ತಿಯನ್ನು ರಾಜಕೀಯಕ್ಕೆ ಎಳೆ ತಂದು, ಬಿಜೆಪಿ ಅಭ್ಯರ್ಥಿ ಗುಟ್ಕಾ ಮಾಡುವವರು, ಕಾಂಗ್ರೆಸ್ ಅಭ್ಯರ್ಥಿ ಆರೋಗ್ಯ ಕಾಪಾಡುವವರೆಂದೆಲ್ಲಾ ಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಎಂದರು.ದಂತ ವೈದ್ಯರು ಹಲ್ಲಿನ ತೊಂದರೆ ಬಿಟ್ಟು, ಬೇರೆ ಯಾವ ಕಾಯಿಲೆಗೆ ಚಿಕಿತ್ಸೆ ಕೊಡಲು ಸಾಧ್ಯ? ನಿಮ್ಮ ಕಲ್ಲೇಶ್ವರ ಮಿಲ್ನಲ್ಲಿ ಫೈಯರ್, ರಿಪೀಟ್ ಬ್ರ್ಯಾಂಡ್ನಡಿ ಏನು ತಯಾರಿಸುತ್ತಿದ್ದೀರೆಂದು ಕಾಂಗ್ರೆಸ್ ಮುಖಂಡರು ಬಹಿರಂಗಪಡಿಸಲಿ. ನೀವು ಮಾಡುತ್ತಿರುವುದೂ ಗುಟ್ಕಾ ದಂಧೆಯನ್ನೇ. ಹಿಂದೆ ಲಿಕ್ಕರ್ ತಯಾರಿಸುತ್ತಿದ್ದಿರಿ. ಯಾವುದರಲ್ಲಿ ಲಾಭ ಬರುತ್ತೋ ಅದನ್ನೆಲ್ಲಾ ಮಾಡಿಕೊಂಡೇ ಬಂದಿದ್ದೀರಿ. ಹಾಗಾಗಿ, ವೈಯಕ್ತಿಕ, ವೃತ್ತಿ, ವ್ಯಾಪಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಪಕ್ಷದ ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಲಿಂಗರಾಜ ಗೌಳಿ, ಸುರೇಶ ರಾವ್ ಸಿಂಧೆ, ಶಂಕರಗೌಡ ಬಿರಾದಾರ್, ಸಂತೋಷ ಕೋಟಿ ಇತರರು ಇದ್ದರು.
- ಯಶವಂತ ರಾವ್ ಜಾಧವ್. ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ
- - - -30ಕೆಡಿವಿಜಿ19: ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.