ಶಿವಮೊಗ್ಗ: ಕೆನರಾ ಬ್ಯಾಂಕ್, ಕೆನರಾ ಕವಚ ಜೀವ ವಿಮಾ ಪಾಲಿಸಿ ಹೊಂದಿದ್ದ ಗ್ರಾಹಕ ನಿಧನರಾಗಿದ್ದು, ಅವರಿಗೆ ಕೆನರಾ ಬ್ಯಾಂಕ್ನಿಂದ ತ್ವರಿತವಾಗಿ ಅವರ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸಿದೆ.
ಕಷ್ಟದ ಸಮಯದಲ್ಲಿ ಫ್ಲೈಮ್ನ ಇತ್ಯರ್ಥವು ದುಃಖದ ಕುಟುಂಬದ ಮೇಲೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದು, ಕಿರಣ್ ಅವರ ತಾಯಿ ಸುನಿತಾ ಹಾಗೂ ಅವರ ಪತ್ನಿ ಕೆನರಾ ಬ್ಯಾಂಕ್ ಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.
ಕೆನರಾ ಗ್ರೂಪ್ ಸೆಕ್ಯೂರ್ನಂತಹ ಸಾಲ ಸಂಬಂಧಿತ ಯೋಜನೆಗಳು ಕುಟುಂಬಕ್ಕೆ ಅನಿರೀಕ್ಷಿತ ಆರ್ಥಿಕ ಸಂಕಷ್ಟಗಳಿಂದ ರಕ್ಷಿಸುವ ಮೂಲಕ ಪ್ರಮುಖ ಆರ್ಥಿಕ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬ್ಯಾಂಕ್ನ ಅಧಿಕಾರಿಗಳು ಈ ಸಂದರ್ಭದಲ್ಲಿ ತೋರಿಸಿದ್ದಾರೆ.ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಶಿವಮೊಗ್ಗದ ಡಿಜಿಎಂ ದೇವರಾಜ್ ಅವರು ವಿಮಾ ಪಾಲಿಸಿಯ ಚೆಕ್ಕನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.