ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಸಿ.ಬಿ. ಕಮಾನ್ ಹತ್ತಿರ ಮಣಿಕಂಠ ಆರ್ಕೇಡ್ ನಲ್ಲಿ ಬುಧವಾರ ನಡೆದ ನೂತನ ಸಿಂಧು ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಿಂಧು ಸಹಕಾರಿ ಬ್ಯಾಂಕ್ ನಗರದ ಮತ್ತು ತಾಲೂಕಿನ ಜನತೆಗೆ ಸಹಕಾರಿಯಾಗಿ ಬೆಳೆಯಲಿ. ಸಮರ್ಪಕವಾಗಿ ಸಾಲ ವಿತರಣೆ ಮಾಡುವ ಮೂಲಕ ಉದ್ಯಮಿಗಳಿಗೆ, ಸ್ವಾವಲಂಬಿಯಾಗಿ, ಬದುಕು ಕಟ್ಟಿಕೊಳ್ಳುವವರಿಗೆ ಆರ್ಥಿಕವಾಗಿ ಸಹಕಾರ ನೀಡುವ ಮೂಲಕ ಜನತೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಲಿ. ಬ್ಯಾಂಕು ಸಹ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.ಚರಬಸವೇಶ್ವರ ಗದ್ದುಗೆಯ ಬಸಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ. ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ಆರ್ಕೇಡ್ ಮಾಲೀಕ ಗುರು ಮಣಿಕಂಠ, ಉದ್ಯಮಿ ರಾಜು ಆನೇಗುಂದಿ, ಡಾ. ಭೀಮರಡ್ಡಿ, ಡಾ. ಮಂಜುನಾಥ ಸ್ವಾಮಿ, ಬಸವರಾಜ ಮಣಿಕಂಠ, ನಿರ್ದೇಶಕರಾದ ಅಮರೇಶ ಹಟ್ಟಿ, ವಿಜಯಕುಮಾರ ಛಾಜೇಡ್, ಆನಂದ ಜೈನ್, ಆನಂದಕುಮಾರ ಕೊಂಡ, ದುರ್ಗಪ್ಪ ಕಟ್ಟಾಲಿ, ವಿಶ್ವನಾಥರಡ್ಡಿ ದರ್ಶನಾಪೂರ, ಬಸವರಾಜ ಹೇರುಂಡಿ ಸೇರಿದಂತೆ ಇತರರಿದ್ದರು.