ಕನ್ನಡಪ್ರಭ ವಾರ್ತೆ ಬೀಳಗಿ
ಅಪಘಾತದಲ್ಲಿ ಲಾರಿ ರಸ್ತೆ ಬದಿಗೆ ಹೊರಳಿದ್ದು, ಚಾಲಕ ಸಿಲುಕಿಕೊಂಡು ಹೊರಬರಲಾಗದೇ ಆತಂಕಕ್ಕೆ ಒಳಗಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲಾರಿಯಲ್ಲಿ ಸಿಲುಕಿ ಹಾಕಿಕೊಂಡ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಗಡೆ ತೆಗೆದರು. ಪ್ರತ್ಯಕ್ಷ ದರ್ಶಿಗಳು ಬೀಳಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಚರಣೆಯಲ್ಲಿ ಬೀಳಗಿಯ ಅಗ್ನಿಶಾಮಕ ಇಲಾಖೆ ಅಧಿಕಾರಿ ಆನಂದ ಚಿನಗುಂಡಿ ಮತ್ತು ಸಿಬ್ಬಂದಿ ರಂಗಪ್ಪ ನಕ್ಕರಗುಂದಿ, ಫಾರೂಕ ಹುಡೇದ, ಆನಂದ ಗುಂಜಿ , ಶಿವಗೆನಪ್ಪ ಕುಂಬಾರ, ಅಷ್ಪಕ್ ಮುಲ್ಲಾ, ಶ್ರೀಶೈಲ್ ಬಿದರಿ, ಸಂಗಪ್ಪ ಕಟಗೇರಿ, ಭಾಗವಹಿಸಿದ್ದರು.