ಸಂತೆಬೆನ್ನೂರು ಪುಷ್ಕರಣಿಯಲ್ಲಿ ಮೀನುಗಳ ಸಾವು

KannadaprabhaNewsNetwork |  
Published : Jan 06, 2026, 02:00 AM IST
ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಪುಷಕರಣಿಯಲ್ಲಿ ಸಾವನ್ನಪ್ಪಿರುವ ಮೀನುಗಳು | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನ ಇತಿಹಾಸ ಪ್ರಸಿದ್ಧ ಸಂತೆಬೆನ್ನೂರು ಗ್ರಾಮದಲ್ಲಿರುವ ಪುಷ್ಕರಣಿಯಲ್ಲಿ ಮೂರ್ನಾಲ್ಕು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿವೆ. ಸುಂದರವಾದ ಈ ಪುಷ್ಕರಣಿ ವೀಕ್ಷಿಸಲು ನಾಡಿನ ವಿವಿಧ ಪ್ರದೇಶಗಳಿಂದ ಪ್ರವಾಸಿಗರು ಬರುತ್ತಾರೆ.

ಚನ್ನಗಿರಿ: ತಾಲೂಕಿನ ಇತಿಹಾಸ ಪ್ರಸಿದ್ಧ ಸಂತೆಬೆನ್ನೂರು ಗ್ರಾಮದಲ್ಲಿರುವ ಪುಷ್ಕರಣಿಯಲ್ಲಿ ಮೂರ್ನಾಲ್ಕು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿವೆ. ಸುಂದರವಾದ ಈ ಪುಷ್ಕರಣಿ ವೀಕ್ಷಿಸಲು ನಾಡಿನ ವಿವಿಧ ಪ್ರದೇಶಗಳಿಂದ ಪ್ರವಾಸಿಗರು ಬರುತ್ತಾರೆ.

ನೀರಿನಲ್ಲಿ ಕಸ-ಕಡ್ಡಿ ಬೀಳದಂತೆ ಕಾಳಜಿ ವಹಿಸಲಾಗಿದೆ. ನೀರು ಪನ್ನೀರಿನಂತೆ ಕಾಣಲು ಇಲ್ಲಿರುವ ಮೀನುಗಳೇ ಕಾರಣ. ಪುಷ್ಕರಣಿ ವೀಕ್ಷಣೆಗೆ ಬರುವ ಪ್ರವಾಸಿಗರು ತಾವು ತರುವ ತಿಂಡಿ, ತಿನ್ನಿಸುಗಳನ್ನು ಮೀನುಗಳಿಗೆ ಹಾಕುತ್ತಾರೆ. ಆದರೆ, ಮೀನುಗಳು ಸಾವನ್ನಪ್ಪುತ್ತಿರುವುದಕ್ಕೆ ನೈಜಕಾರಣ ತಿಳಿದಿಲ್ಲ.

ಪುಷ್ಕರಣಿಯ ಜಲರಾಶಿ ಮಧ್ಯದಲ್ಲಿ ಆಕರ್ಷಣೀಯ ವಸಂತ ಮಂಟಪವಿದೆ. ಅದರಲ್ಲಿ ಅಧಿಕ ಸಂಖ್ಯೆಯಲ್ಲಿ ಪಾರಿವಾಳಗಳು ವಾಸವಿವೆ. ಇವುಗಳ ತ್ಯಾಜ್ಯದಿಂದ ಏನಾದರೂ ನೀರು ಮಲೀನವಾಗಿರ ಬಹುದೇ ಅಥವಾ ಬರುವ ಪ್ರವಾಸಿಗರು ಮೀನಿಗೆ ಹಾಕುವ ತಿನಿಸುಗಳಿಂದ ಸಾವು ಕಂಡಿವಿಯೇ ಎಂಬ ಶಂಕೆ ಗ್ರಾಮಸ್ಥರು, ಪ್ರವಾಸಿಗರಲ್ಲಿ ವ್ಯಕ್ತವಾಗುತ್ತಿದೆ.

ಪೋಟಾಶಿಯಂ ಪರರ್ಮಾಗ್ನೆಟ್ ಔಷಧಿ:

ಈ ಬಗ್ಗೆ ಜಿಲ್ಲಾ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಅಣ್ಣಪ್ಪ ಮತ್ತು ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪುಷ್ಕರಣಿ ನೀರಿನಲ್ಲಿ ಪೋಷಕಾಂಶ ಹಾಗೂ ಆಮ್ಲಜನಕದ ಕೊರತೆಯಾಗಿದೆ. ಪೋಟಾಶಿಯಂ ಪರರ್ಮಾಗ್ನೆಟ್ ಔಷಧಿಯನ್ನು 7 ದಿನಗಳ ಕಾಲ ಪುಷ್ಕರಣಿ ನೀರಿಗೆ ಸಿಂಪರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

- - -

-5ಕೆಸಿಎನ್‌ಜಿ3:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ