ರಾಣಿಬೆನ್ನೂರು: ಪಂಚ ರಾಜ್ಯಗಳ ಚುನಾವಣೆ ಪೈಕಿ ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ವಿಜಯ ಸಾಧಿಸಿದ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೋಮವಾರ ಸಂಜೆ ನಗರದ ಸ್ಟೇಷನ್ ರಸ್ತೆ ಪಕ್ಷದ ಕಚೇರಿಯ ಮುಂಭಾಗದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಚೋಳಪ್ಪ ಕಸವಾಳ, ಎ.ಬಿ.ಪಾಟೀಲ, ಮಂಜುನಾಥ ಓಲೇಕಾರ, ಚನ್ನಮ್ಮ ಗುರುಪಾದೇವರಮಠ, ಪವನಕುಮಾರ ಮಲ್ಲಾಡದ, ಮೈಲಪ್ಪ ಗೋಣಿಬಸಮ್ಮನವರ, ಅಮೋಘ ಬದಾಮಿ, ರಮೇಶ ಕರಡೆಣ್ಣನವರ, ಮೃತ್ಯುಂಜಯ ಪಾಟೀಲ, ಲಲಿತಾ ನಿಡಗುಂದಿ, ಬಸವರಾಜ ರೊಡ್ಡನವರ, ಮೌನೇಶ ತಳವಾರ ಮತ್ತಿತರರಿದ್ದರು.