245 ಮತಗಟ್ಟೆಗಳಲ್ಲಿ ಧ್ವಜಾರೋಹಣ, ಪ್ರತಿಜ್ಞಾವಿಧಿ ಕಾರ್ಯಕ್ರಮ

KannadaprabhaNewsNetwork | Published : Apr 30, 2024 2:03 AM

ಸಾರಾಂಶ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಾಗೃತಿಗಾಗಿ ಚುನಾವಣಾ ಆಯೋಗ ನಿರ್ದೇಶನದಂತೆ ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ಏಕಕಾಲಕ್ಕೆ "ನಮ್ಮ ನಡೆ ಮತಗಟ್ಟೆ ಕಡೆ " ಜಾಗೃತಿ ಹಾಗೂ ಅವಳಿ ತಾಲೂಕಿನ 245 ಮತಗಟ್ಟೆಗಳಲ್ಲಿ ಧ್ವಜಾರೋಹಣ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮ ಹೊನ್ನಾಳಿಯಲ್ಲಿ ನಡೆಯಿತು.

- ಅವಳಿ ತಾಲೂಕುಗಳಲ್ಲಿ "ನಮ್ಮ ನಡೆ ಮತಗಟ್ಟೆ ಕಡೆ " ಜಾಗೃತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಾಗೃತಿಗಾಗಿ ಚುನಾವಣಾ ಆಯೋಗ ನಿರ್ದೇಶನದಂತೆ ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ಏಕಕಾಲಕ್ಕೆ "ನಮ್ಮ ನಡೆ ಮತಗಟ್ಟೆ ಕಡೆ " ಜಾಗೃತಿ ಹಾಗೂ ಅವಳಿ ತಾಲೂಕಿನ 245 ಮತಗಟ್ಟೆಗಳಲ್ಲಿ ಧ್ವಜಾರೋಹಣ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು.

ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್ ಹಾಗೂ ಸ್ವೀಪ್ ಸಮಿತಿ ಮುಖ್ಯಸ್ಥೆ ಹಾಗೂ ತಾ.ಪಂ. ಇ.ಒ. ಸುಮಾ "ನಮ್ಮ ನಡೆ ಮತಗಟ್ಟೆ ಕಡೆ " ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.

ವಿಶೇಷ ಮತದಾನ ಜಾಗೃತಿಃ ತಾಲೂಕಿನ ಕುಂದೂರು ಗ್ರಾಮದಲ್ಲಿ ನೂರಾರು ವಿಶೇಷಚೇತನರು ಬೈಕ್ ರ್ಯಾಲಿ ಮೂಲಕ ಜಾಥ ನಡೆಸಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೆ ಮಾತು ಬಾರದ 15 ಜನರು ತಮ್ಮ ಸಂಜ್ಞೆ ಮೂಲಕ ಮತದಾನ ಬಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಹೊನ್ನಾಳಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪುರಸಭೆ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ವೇಳೆ ಮಕ್ಕಳು ನೃತ್ಯದ ಮೂಲಕ ಜಾಗೃತಿ ಮೂಡಿಸಿದರು.

ಮತದಾನ ಪ್ರಮಾಣ ಹೆಚ್ಚಿಸಲು ಹಲವಾರು ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತದಾರರು ತಮ್ಮ ಜಾತಿಯವರು, ತಮ್ಮ ಊರಿನವರು ಸ್ನೇಹಿತರು ಎಂದು ನೋಡದೇ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಅಭ್ಯರ್ಥಿಗೆ ಕಡ್ಡಾಯವಾಗಿ ಮತ ನೀಡಿ ಎಂದು ಮನವಿ ಮಾಡಿದರು.

ಸ್ವೀಪ್ ಮುಖ್ಯಸ್ಥೆ ಹಾಗೂ ತಾಪಂ ಇಒ ಸುಮಾ ಮಾತನಾಡಿ, ಮಹಿಳೆಯರು ತಮ್ಮ ತಮ್ಮ ಸ್ನೇಹಿತೆಯರು ಹಾಗೂ ಬಂಧು ಬಳಗದ ಜತೆ ಮತಗಟ್ಟೆಗೆ ಬೇಗ ಬಂದು ಮತದಾನ ಮಾಡಿದರೆ ಮಾತ್ರ ಯೋಗ್ಯ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಅಭ್ಯರ್ಥಿಗೆ ಮತ ನೀಡಿದಂತೆ ಆಗುತ್ತದೆ. ಆದ್ದರಿಂದ ಎಲ್ಲ ಮತದಾರರು ಮತಗಟ್ಟೆ ಕಡೆ ತಮ್ಮ ನಡೆ ಇರಲಿ ಎಂದರು.

ಕುಂದೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಚಿದಾನಂದಮೂರ್ತಿ, ಸದಸ್ಯರಾದ ಸುರೇಶ್, ಪ್ರಸನ್ನಕುಮಾರ್, ಆಂಜನೆಯ, ರಹಮತ್‌ ಉಲ್ಲಾ ಖಾನ್, ಪಿಡಿಒ ವಿಜಯಕುಮಾರ ಗೌಡ, ವ್ಯವಸ್ಥಾಪಕ ಮಹ್ಮದ್ ರಫಿ, ಭೋಜರಾಜ್, ಶೈಲಜಾ ವಿಶೇಷಚೇತನರು ಉಪಸ್ಥಿತರಿದ್ದರು.

- - - -29ಎಚ್ಎಲ್ಐ1:

"ನಮ್ಮ ನಡೆ ಮತಗಟ್ಟೆ ಕಡೆ " ಕಾಲ್ನಡಿಗೆ ಜಾಥಾಕ್ಕೆ ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್, ಸ್ವೀಪ್ ಸಮಿತಿ ಮುಖ್ಯಸ್ಥೆ ಹಾಗೂ ತಾ.ಪಂ. ಇಒ ಸುಮಾ ಚಾಲನೆ ನೀಡಿದರು.

Share this article