ಚೈತ್ರಾ ಕುಂದಾಪುರ ಅವರು ತಮ್ಮ ತಂದೆಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ ಎಂದು ಉಡುಪಿಯ ಹಿರಿಯ ನಾಗರಿಕರ ನ್ಯಾಯಾಲಯ ಆದೇಶಿಸಿದೆ. ಚೈತ್ರಾ ಮತ್ತು ತನ್ನ ಪತ್ನಿ ತನಗೆ ಕಿರುಕುಳ ನೀಡುತಿದ್ದಾರೆ ಎಂದು ಆಕೆಯ ತಂದೆ ಬಾಲಕೃಷ್ಣ ನಾಯ್ಕ್ ನ್ಯಾಯಾಲಯದ ಮೊರೆ ಹೋಗಿದ್ದರು.

ಉಡುಪಿ : ಚೈತ್ರಾ ಕುಂದಾಪುರ ಅವರು ತಮ್ಮ ತಂದೆಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ ಎಂದು ಉಡುಪಿಯ ಹಿರಿಯ ನಾಗರಿಕರ ನ್ಯಾಯಾಲಯ ಆದೇಶಿಸಿದೆ. 

ತಂದೆ ಬಾಲಕೃಷ್ಣ ನಾಯ್ಕ್ ನ್ಯಾಯಾಲಯದ ಮೊರೆ ಹೋಗಿದ್ದರು

ಚೈತ್ರಾ ಮತ್ತು ತನ್ನ ಪತ್ನಿ ತನಗೆ ಕಿರುಕುಳ ನೀಡುತಿದ್ದಾರೆ ಎಂದು ಆಕೆಯ ತಂದೆ ಬಾಲಕೃಷ್ಣ ನಾಯ್ಕ್ ನ್ಯಾಯಾಲಯದ ಮೊರೆ ಹೋಗಿದ್ದರು. 

ಬಾಲಕೃಷ್ಣ ಪರ ತೀರ್ಪು

ಇದೀಗ ನ್ಯಾಯಾಲಯ ಬಾಲಕೃಷ್ಣ ಪರ ತೀರ್ಪು ನೀಡಿದೆ. ಚೈತ್ರಾ ಅವರು ಬಾಲಕೃಷ್ಣಗೆ ಯಾವುದೇ ದೈಹಿಕ, ಮಾನಸಿಕ ಕಿರುಕುಳ ನೀಡುವಂತಿಲ್ಲ. ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ನಿಯಮಗಳು ಅಡಿಯಲ್ಲಿ ರಕ್ಷಣೆ ನೀಡುವಂತೆ ನ್ಯಾಯಾಲಯ ಕುಂದಾಪುರ ಪೊಲೀಸರಿಗೆ ಸೂಚನೆ ನೀಡಿದೆ. 

ತಂದೆಯ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿರುವ ಚೈತ್ರಾ, ಸದ್ಯ ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಸಕ್ರಿಯವಾಗಿದ್ದಾರೆ.