ಆರ್ಎಸ್ಎಸ್ ಕುರಿತು ಶುಭದ ರಾವ್ ಟೀಕೆ: ಬಿಜೆಪಿ ಆಕ್ರೋಶಭಾರತವು ಭಕ್ತಿ ಮತ್ತು ಶಕ್ತಿಯ ಆರಾಧನೆಯ ದೇಶ. ಆರ್ಎಸ್ಎಸ್ ಕಳೆದ ಶತಮಾನದಿಂದ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಸ್ವಯಂಸೇವಕರ ಕೈಯಲ್ಲಿರುವ ಲಾಠಿ ದೌರ್ಜನ್ಯಕ್ಕಾಗಿ ಅಲ್ಲ, ಆತ್ಮರಕ್ಷಣೆ ಹಾಗೂ ಶಿಸ್ತಿನ ಸಂಕೇತವಾಗಿದೆ. ನೂರು ವರ್ಷಗಳ ಇತಿಹಾಸದಲ್ಲೂ ಆರ್ಎಸ್ಎಸ್ ಹಿಂಸೆಗೆ ಪ್ರಚೋದನೆ ನೀಡಿದ ಉದಾಹರಣೆ ಒಂದೂ ಇಲ್ಲ ಎಂದು ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.