ಮಹಲ್ಗೋಡು ಸೇತುವೆಯಲ್ಲಿ ದಿಢೀರ್ ಪ್ರವಾಹ

KannadaprabhaNewsNetwork |  
Published : Jun 18, 2024, 12:49 AM IST
೧೭ಬಿಹೆಚ್‌ಆರ್ ೧-೨: ಬಾಳೆಹೊನ್ನೂರಿನಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೊನ್ನವಳ್ಳಿ-ಮಹಲ್ಗೋಡು ಸೇತುವೆಯ ಮೇಲೆ ದಿಢೀರ್ ಪ್ರವಾಹ ಉಂಟಾಗಿ ಎರಡು ಗಂಟೆಗೂ ಅಧಿಕ ಕಾಲ  ಸಂಚಾರ ಸ್ಥಗಿತಗೊಂಡಿತ್ತು. | Kannada Prabha

ಸಾರಾಂಶ

ಬಾಳೆಹೊನ್ನೂರು, ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ-ಮಹಲ್ಗೋಡು ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ದಿಢೀರ್ ಪ್ರವಾಹ ಉಂಟಾಗಿ ಬಾಳೆಹೊನ್ನೂರು-ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿದು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ಎರಡು ಗಂಟೆಗೂ ಅಧಿಕ ಕಾಲ ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತ । ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋದ ಮೂರು ಹಸುಗಳುಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ-ಮಹಲ್ಗೋಡು ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ದಿಢೀರ್ ಪ್ರವಾಹ ಉಂಟಾಗಿ ಬಾಳೆಹೊನ್ನೂರು-ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿದು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.ಬಾಳೆಹೊನ್ನೂರಿನಿಂದ ಕಳಸ-ಹೊರನಾಡಿಗೆ ತೆರಳುವ ಮಾರ್ಗದ ಮಹಲ್ಗೋಡು ಸುತ್ತಮುತ್ತ ಹರಿಯುವ ಕಿರು ಹಳ್ಳಗಳಾದ ದೊಡ್ಡಕಟ್ಟು, ಸಣ್ಣಕಲ್ಲುಗಂಡಿ, ದೊಡ್ಡಕಲ್ಲುಗಂಡಿ, ಗೊರಸನಗದ್ದೆ, ಮಹಲ್‌ಗೋಡು ಎಸ್ಟೇಟ್ ಹಳ್ಳ, ನೇಮನಹಳ್ಳಿ, ಬಹಿಷ್ಕಾರ್, ಹೊನ್ನವಳ್ಳಿ, ಕಬ್ಬಿನಮಣ್ಣು ಕಿರು ಹಳ್ಳಗಳಲ್ಲಿನ ನೀರು ಹೊನ್ನವಳ್ಳಿ-ಮಹಲ್ಗೋಡು ಸೇತುವೆ ಮೂಲಕ ಹಾದು ಭದ್ರಾನದಿ ಸೇರುತ್ತದೆ.ಈ ಕಿರು ಹಳ್ಳಗಳು ಹರಿಯುವ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಧಾರಾಕಾರ ಮಳೆ ಯಿಂದ ಭಾರೀ ಪ್ರಮಾಣದ ನೀರು ಒಮ್ಮೆಲೆ ಹೊನ್ನವಳ್ಳಿ-ಮಹಲ್ಗೋಡು ಸೇತುವೆ ಪ್ರವೇಶಿಸಿದ್ದು, ಮುಖ್ಯರಸ್ತೆ ಮೇಲೆ ಸಂಪೂರ್ಣ ನೀರು ಬಂದು ಸಂಪರ್ಕ ಕಡಿತವಾಗಿತ್ತು. ಎರಡೂ ಬದಿಗಳಲ್ಲಿ ಬಸ್ , ಪ್ರವಾಸಿ ವಾಹನಗಳು ಸೇತುವೆ ಮೇಲೆ ಸಂಚರಿಸಲಾಗದೇ ಸಾಲುಗಟ್ಟಿ ನಿಂತಿದ್ದವು. ನೀರಿನ ರಭಸಕ್ಕೆ 3 ಹಸುಗಳು ಸಿಲುಕಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹ ಕಡಿಮೆಯಾದ ಬಳಿಕ ವಾಹನ ಸಂಚಾರ ಪುನಾರಂಭಗೊಂಡಿತು. ಹೊನ್ನವಳ್ಳಿ-ಮಹಲ್ಗೋಡು ಸೇತುವೆ ನೆಲಮಟ್ಟದಿಂದ ಬಹಳ ಎತ್ತರವಿಲ್ಲ. ಭಾರೀ ಮಳೆ ಬಂದಾಗ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೇತುವೆ ಎತ್ತರಿಸುವ ಕೆಲಸ ವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.೧೭ಬಿಹೆಚ್‌ಆರ್ ೧-೨: ಬಾಳೆಹೊನ್ನೂರಿನಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೊನ್ನವಳ್ಳಿ-ಮಹಲ್ಗೋಡು ಸೇತುವೆಯ ಮೇಲೆ ದಿಢೀರ್ ಪ್ರವಾಹ ಉಂಟಾಗಿ ಎರಡು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ