ಪ್ರವಾಹ ಭೀತಿ: ಸುರಕ್ಷಿತ ಪ್ರದೇಶಕ್ಕೆ ತೆರಳಿ

KannadaprabhaNewsNetwork |  
Published : Aug 22, 2025, 02:01 AM IST
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಮಾಜಿ ಸಂಸದ ರಮೇಶಕತ್ತಿ ಪರಿಶೀಲಿಸಿದರು. | Kannada Prabha

ಸಾರಾಂಶ

ಹಿರಣ್ಯಕೇಶಿ ನದಿ ಪಾತ್ರದಲ್ಲಿ ಸಹ ಪ್ರವಾಹ ಭೀತಿ ಹೆಚ್ಚಿಸಿದೆ. ಅದಕ್ಕಾಗಿ ನದಿ ತೀರದ ಗ್ರಾಮಗಳ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ತೆರಳಬೇಕು

ಕನ್ನಡಪ್ರಭ ವಾರ್ತೆ ಹುಕ್ಕೇರಿ

ವಾಯುಭಾರ ಕುಸಿತದಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಿಡಕಲ್ ಜಲಾಶಯ ತುಂಬಿದೆ. ಅದರಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರ ಜೊತೆಗೆ ಹಿರಣ್ಯಕೇಶಿ ನದಿ ಪಾತ್ರದಲ್ಲಿ ಸಹ ಪ್ರವಾಹ ಭೀತಿ ಹೆಚ್ಚಿಸಿದೆ. ಅದಕ್ಕಾಗಿ ನದಿ ತೀರದ ಗ್ರಾಮಗಳ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ತೆರಳಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ವಿನಂತಿಸಿದರು.

ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಬುಧವಾರ ಘಟಪ್ರಭಾ ನದಿ ಪ್ರವಾಹ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಹಿರಣ್ಯಕೇಶಿ ನದಿ ಪಾತ್ರದಲ್ಲಿ ಬರುವ 16 ಗ್ರಾಮಗಳ ಗ್ರಾಮಸ್ಥರು ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಈ ಗ್ರಾಮಸ್ಥರಿಗೆ ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆದು ಜನರಲ್ಲಿ ಪ್ರವಾಹ ಭೀತಿಯ ಆತಂಕ ನಿವಾರಿಸುವಂತೆ ಸೂಚಿಸಿದರು. ಚಿತ್ರಿ ಜಲಾಶಯದಿಂದ 35 ಸಾವಿರ ಕ್ಯು. ಮತ್ತು ನದಿಯ 7 ಸಾವಿರ ಕ್ಯು. ಸೇರಿ ಒಟ್ಟು 42 ಸಾವಿರ ಕ್ಯು. ಹಿರಣ್ಯಕೇಶಿ ನದಿಗೆ ಮತ್ತು ಹಿಡಕಲ್ ಜಲಾಶಯದಿಂದ 35 ಸಾವಿರ ಕ್ಯು. ನೀರು ಹರಿದು ಬರುತ್ತಿದೆ. ಇದರಿಂದ ಯರನಾಳ-ಹುಕ್ಕೇರಿ ಮತ್ತು ಘೋಡಗೇರಿ-ಹುಕ್ಕೇರಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಅವರು ತಿಳಿಸಿದರು.

ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪೂರಿ, ಪಿಡಿಒ ಮಲ್ಲಿಕಾರ್ಜುನ ಗುಡಸಿ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಚೌಗಲಾ, ಮುಖಂಡರಾದ ರಾಚಯ್ಯಾ ಹಿರೇಮಠ, ಕಲಗೌಡ ಪಾಟೀಲ, ಆದರ್ಶ ಅಂಕಲಗಿ, ದುಂಡನಗೌಡ ಪಾಟೀಲ, ಗುರು ಕಡೇಲಿ, ಚನ್ನಪ್ಪಾ ಸೊಂಟನವರ, ಮುತ್ತು ಭೂಶಿ, ನಿರ್ವಾಣಿ ಅಂಕಲಗಿ, ಮುತ್ತು ಗೌರಿ, ಶ್ರೀಕಾಂತ ರುದ್ರಪ್ಪಗೋಳ, ಪುಂಡಲೀಕ ಪೂಜೇರಿ, ಬಾಬು ಅಂಕಲಗಿ, ಶ್ರೀಶೈಲ ಭೂಶಿ, ವಿಶಾಲ ಪೂಜೇರಿ, ಸುರೇಶ ರಾಜನ್ನವರ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ