ಹೆಚ್ಚು ಆದಾಯ ತರಲಿದೆ ಪುಷ್ಪ ಕೃಷಿ: ಡಿಸಿ ಮೀನಾ

KannadaprabhaNewsNetwork |  
Published : Sep 16, 2024, 01:46 AM IST
ಚಿಕ್ಕಮಗಳೂರಿನ ಕಾಫಿ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮಾತನಾಡಿದರು. ಜಿಪಂ ಸಿಇಓ ಕೀರ್ತನಾ, ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ, ಪೂರ್ಣಿಮಾ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ತೋಟಗಾರಿಕೆ ಬೆಳೆಯಲ್ಲಿ ಪುಷ್ಪ ಕೃಷಿ ಬಹು ಮುಖ್ಯವಾದ ಪಾತ್ರ ಹೊಂದಿದೆ. ಇದು, ಹೆಚ್ಚು ಆದಾಯ ತಂದುಕೊಡುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹೇಳಿದ್ದಾರೆ.

ವಿದೇಶಿ ಹಣ್ಣು, ವಾಣಿಜ್ಯ ಪುಷ್ಪಗಳ ಬೇಸಾಯ ಕುರಿತ ತರಬೇತಿ ಕಾರ್ಯಾಗಾರ, ಪ್ರದರ್ಶನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತೋಟಗಾರಿಕೆ ಬೆಳೆಯಲ್ಲಿ ಪುಷ್ಪ ಕೃಷಿ ಬಹು ಮುಖ್ಯವಾದ ಪಾತ್ರ ಹೊಂದಿದೆ. ಇದು, ಹೆಚ್ಚು ಆದಾಯ ತಂದುಕೊಡುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹೇಳಿದ್ದಾರೆ.

ಕಾಫಿ ಮಂಡಳಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕಾಫಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆಯಡಿ ಅಪ್ರಧಾನ ವಿದೇಶಿ ಹಣ್ಣು ಮತ್ತು ವಾಣಿಜ್ಯ ಪುಷ್ಪಗಳ ಬೇಸಾಯದ ಕುರಿತು ನಡೆದ ತರಬೇತಿ ಕಾರ್ಯಾಗಾರ-ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಬಿಡಿ ಹೂವುಗಳನ್ನು ಹಾರ ತಯಾರಿಕೆ, ಬಾಕ್ವೇಟ್‌ ತಯಾರಿಕೆ, ದೇವರ ಪೂಜೆ, ವೇದಿಕೆ ಅಲಂಕಾರ ಮತ್ತು ಬಣ್ಣ ತೆಗೆಯಲು ಬಳಸಲಾಗುತ್ತಿದೆ. ಈ ಕೃಷಿಯಲ್ಲಿ ಪುಷ್ಪಗಳನ್ನು ಅತೀ ಕಡಿಮೆ ಭೂಮಿಯಲ್ಲಿ ಬೆಳೆದು ಹೆಚ್ಚು ಆದಾಯ ಗಳಿಸಬಹುದು ಎಂದು ತಿಳಿಸಿದರು.

ಹಣ್ಣುಗಳು ಅಪ್ರಧಾನವಾಗಿದ್ದರೂ ಪೋಷಕಾಂಶಗಳ ವಿಚಾರದಲ್ಲಿ ಪ್ರಧಾನ ಹಣ್ಣುಗಳಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಜೀವಸತ್ವಗಳನ್ನು ಹೊಂದಿವೆ. ಈ ಹಣ್ಣುಗಳಲ್ಲಿ ಪ್ರಮುಖವಾಗಿ ನೆಲ್ಲಿಕಾಯಿ, ಸೀತಾಫಲ, ಅಂಜೂರ, ಬಾರೆ ಹಣ್ಣು, ಹಲಸು, ಲಿಚ್ಚಿ, ಕವಳೆ, ಬೆಲ್ಲದ ಹಣ್ಣು, ಫ್ಯಾಷನ್ ಫ್ರೂಟ್, ಮ್ಯಾಂಗೋ ಸ್ಟಿನ್, ಬೆಣ್ಣೆ ಹಣ್ಣು ಹಾಗೂ ರಾಮ್‌ಬೂತಾನ್ ಹಣ್ಣು ಮುಂತಾದವು ಆರೋಗ್ಯಕ್ಕೆ ಪೂರಕ ಅಂಶಗಳನ್ನು ಹೊಂದಿವೆ ಎಂದರು. ಈ ಹಣ್ಣುಗಳಲ್ಲಿ ಕೆಲವು ಹಣ್ಣುಗಳು ಬಯಲು ಸೀಮೆ ಹಾಗೂ ಇನ್ನು ಕೆಲವು ಮಲೆನಾಡು ಪ್ರದೇಶಗಳಲ್ಲಿ ಬೆಳೆಯಲು ಸೂಕ್ತ ವಾಗಿದ್ದು, ನೇರ ಹಾಗೂ ಸಂಸ್ಕರಿತ ರೂಪದಲ್ಲಿ ಇವುಗಳನ್ನು ಉಪಯೋಗಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್‌. ಕೀರ್ತನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತೋಟಗಾರಿಕೆ ಉಪ ನಿರ್ದೇಶಕಿ ಪೂರ್ಣಿಮಾ, ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ, ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಹಿತ್ತಲಮನಿ ಉಪಸ್ಥಿತರಿದ್ದರು.

ಸೋಮನಹಳ್ಳಿ ಕಾವಲಿನ ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ನಟರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ತೋಟಗಾರಿಕೆ ಅಧಿಕಾರಿ ಅರುಣ್‌ಕುಮಾರ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ನೇತ್ರಾವತಿ ಸ್ವಾಗತಿಸಿ, ನಟೇಶ್‌ಕುಮಾರ್ ವಂದಿಸಿದರು. 14 ಕೆಸಿಕೆಎಂ 2ಚಿಕ್ಕಮಗಳೂರಿನ ಕಾಫಿ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿದರು. ಜಿಪಂ ಸಿಇಓ ಕೀರ್ತನಾ, ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ, ಪೂರ್ಣಿಮಾ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ