ವಿಘ್ನೇಶ್ ಎಂ. ಭೂತನಕಾಡು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈಗಾಗಲೇ ರಾಜಾಸೀಟು ಹೂವಿನ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ. ಈ ಬಾರಿ ಸುಮಾರು 12 ಸಾವಿರ ಹೂವಿನ ಕುಂಡಗಳಲ್ಲಿ ಹಲವು ಬಗೆಯ ಹೂವುಗಳನ್ನು ಬೆಳೆಸಲಾಗಿದೆ. ಅಂದಾಜು 25 ಲಕ್ಷ ರು. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಸುಮಾರು 50 ಸಾವಿರ ಮಂದಿ ಸ್ಥಳೀಯರು ಹಾಗೂ ಪ್ರವಾಸಿಗರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿರುವ ಪಾಡಿ ಇಗ್ಗುತಪ್ಪ ದೇವಾಲಯವನ್ನು ಮಳೆ ದೈವ ಎಂದೇ ಕರೆಯಲಾಗುತ್ತದೆ. ಇದು ಕೊಡವರ ಅತ್ಯಂತ ಪ್ರಮುಖ ದೇವಸ್ಥಾನವೆಂದು ಪರಿಗಣಿಸಲಾಗಿದೆ. ತೀರ್ಥಯಾತ್ರೆಯ ಅತ್ಯುತ್ತಮ ಸ್ಥಳಗಳಲ್ಲಿ ಇದೂ ಒಂದಾಗಿದೆ. ಪಾಡಿ ಇಗುತಪ್ಪ ದೇವಾಲಯವನ್ನು 1810 ರಲ್ಲಿ ಲಿಂಗ ರಾಜೇಂದ್ರ ನಿರ್ಮಿಸಿದರು. ಲಿಂಗ ರಾಜೇಂದ್ರ ಆಳ್ವಿಕೆಯಲ್ಲಿ ಈ ದೇವಾಲಯವು ಪೂಜಾ ಸ್ಥಳವಾಗಿತ್ತು. ದೇವಸ್ಥಾನವನ್ನು 2008 ರಲ್ಲಿ ಕರ್ನಾಟಕ ಸರ್ಕಾರದಿಂದ ಪುನನಿರ್ಮಿಸಲಾಯಿತು.ಮಳೆಗಾಗಿ ಇಗ್ಗುತಪ್ಪನನ್ನು ಪ್ರಾರ್ಥಿಸುತ್ತಾರೆ. ಈ ಮೂಲಕ ಉತ್ತಮ ಬೆಳೆಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ಪ್ರತಿ ವರ್ಷವೂ ಹುತ್ತರಿ ಹಬ್ಬದಂದು ಬತ್ತವನ್ನು ಮೊದಲ ಬಾರಿಗೆ ಇಗ್ಗುತಪ್ಪನಿಗೆ ಸೇರಿದ ಕ್ಷೇತ್ರಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಹತ್ತುರಿ ಸುಗ್ಗಿಯ ಉತ್ಸವದ ಸಮಯದಲ್ಲಿ ವರ್ಷದ ಮೊದಲ ಭತ್ತದ ಕದಿರನ್ನು ಇಗ್ಗುತಪ್ಪನಿಗೆ ಅರ್ಪಿಸಲಾಗುತ್ತದೆ.
ಪಿರಂಗಿ ಮತ್ತು ರಾಷ್ಟ್ರ ಧ್ವಜ ಜೊತೆ ಸೈನಿಕ, ಮಕ್ಕಳಿಗಾಗಿ ಚೋಟಾಭೀಮ್, ಬಾರ್ಬಿ ಗರ್ಲ್ ಸೇರಿದಂತೆ ವಿವಿಧ ಕಲಾಕೃತಿಗಳು, ಸಿಟ್ಟಿಂಗ್ ಲೇಡಿ ಕಲಾಕೃತಿ, ಮೂರು ಸೆಲ್ಫಿ ಪಾಯಿಂಟ್ ಗಳು ಇರಲಿದೆ. ವಿವಿಧ ರೀತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ನಾಟಿ ಮಾಡಲಾಗಿದ್ದು, ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯಲಿದೆ. ತರಕಾರಿ ಕೆತ್ತನೆ ಹಾಗೂ ಹಣ್ಣಿನ ಕೆತ್ತನೆ ಕೂಡ ಇರಲಿದೆ.
-ಯೋಗೇಶ್ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಮಡಿಕೇರಿ