ಅಂಬಿಗರ ಚೌಡಯ್ಯ ವಚನ ಗ್ರಂಥ ರಥಕ್ಕೆ ಪುಷ್ಪವೃಷ್ಟಿ

KannadaprabhaNewsNetwork |  
Published : Jan 22, 2026, 01:15 AM IST
ಫೋಟೋ- ಜಯಂತಿ 1ಕಲಬುರಗಿಯಲ್ಲಿ ಬುಧವಾರ ನಡೆದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ರ್ಯಾಲಿ ನಗರೇಶ್ವರ ಶಾಲೆಯಿಂದ ಪಂಡಿತ ರಂಗ ಮಂದಿರವರೆಗೂ ನಡೆದು ಗಮನ ಸೆಳೆಯಿತು. | Kannada Prabha

ಸಾರಾಂಶ

Flowers showered on the chariot of Ambigara Choudaiah's Vachana Granth

-ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯನವರ ಬಾವಚಿತ್ರ, ವಚನ ಗ್ರಂಥ ಮೆರವಣಿಗೆ । ಜನಮನ ಸೆಳೆದ ಹೆಲಿಕಾಪ್ಟರ್‌ ಪುಷ್ಪವೃಷ್ಟಿ

--

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರ ಹಾಗೂ ಜಿಲ್ಲಾದ್ಯಂತ ಅಂಬಿಗ ಚೌಡಯ್ಯ ನವರ 906ನೇ ಜಯಂತ್ಯುತ್ಸವ ಸಂಭ್ರಮದಿಂದ ನಡೆಯಿತು.

ಜಯಂತಿ ಅಂಗವಾಗಿ ಕಳೆದ 2 ದಿನಗಳಿಂದಲೇ ನಗರದಲ್ಲಿ ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಜಯಂತ್ಯುತ್ಸವ ಪ್ರಯುಕ್ತ ನಡೆದ ಬೃಹತ್‌ ರ್‍ಯಾಲಿ, ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಜನಮನ ಸೆಳೆಯಿತು.

ನೆಹರು ಗಂಜ್‌ನಿಂದ ಶುರುವಾಗಿದ್ದ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಸೂಪರ್‌ ಮಾರ್ಕೇಟಿಂಗ ಜಗತ್‌ ವೃತ್ತದವರೆಗೆ ಬರುವಾಗ ಹೆಲಿಕಾಪ್ಟರ್‌ ತುಂಬ ಕೆಳ ಸ್ತರದಲ್ಲಿ ಹಾರುತ್ತ ರ್‍ಯಾಲಿ ಮೇಲೆ ಗುಲಾಬಿ ಹೂವಿನ ಸುರಿಮಳೆಗರೆಯಿತು.

ವಿವಿಧ ಸಮುದಾಯದ ಮುಖಂಡರು, ಗಣ್ಯರು, ಕಾರ್ಯಕರ್ತರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರ್‍ಯಾಲಿ ಮಾರ್ಗದುದ್ದಕ್ಕೂ ಭಕ್ತರು ಜಯಘೋಷ ಕೂಗಿ, ನಿಜ ಶರಣ ಅಂಬಿಗ ಚೌಡಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಜಗತ್‌ ವೃತ್ತದಲ್ಲಿ ನಿಜ ಶರಣರ ಭಾವಚಿತ್ರದ ಗೋಪುರ ಜನಮನ ಸೆಳೆಯಿತು.

ರ್‍ಯಾಲಿಯಿಂದಾಗಿ ನಿಜ ಶರಣರ ಶರಣ ಸಂಸ್ಕೃತಿ, ಸಮಾನತೆ, ಶ್ರಮದ ಮಹತ್ವ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂದೇಶ ಸಾರ್ವಜನಿಕವಾಗಿ ರವಾನಿಸಲಾಯಿತು. 906ನೇ ಜಯಂತಿ, ಶಾಂತಿ, ಸೌಹಾರ್ದ ಮತ್ತು ಭಕ್ತಿಭಾವದಿಂದ ಅತ್ಯಂತ ಅದ್ಧೂರಿಯಾಗಿ ಎಲ್ಲಾ ಸಮಾಜದವರು ಸೇರಿ ಆಚರಿಸಿದ್ದು ಗಮನ ಸೆಳೆಯಿತು.

ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಆವರಣದಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರ ಹಾಗೂ ವಚನಗ್ರಂಥ ಹೊತ್ತ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಭವ್ಯ ಮೆರವಣಿಗೆ ಡಾ. ಎಸ್.ಎಂ ಪಂಡಿತರಂಗಮಂದಿರದವರೆಗೆ ನಡೆಯಿತು. ಜಾಥಾದಲ್ಲಿ ಚನ್ನಪಟ್ಟಣ, ನವಲಗುಂದದ ಗೊಂಬೆಗಳ ಪ್ರದರ್ಶನ, ನಾಸಿಕ್ ಡೋಲ್, ಆಂಧ್ರಪ್ರದೇಶದ ಜಾನಪದ ಕಲಾತಂಡಗಳು, ಬಾಜಾಭಜಂತ್ರಿ, ಕಾಂತಾರಾ ಚಂಡಿ ಮೆರವಣಿಗೆ, ಹುಲಿಕುಣಿತ, ಒಂಟೆ ಕುದುರೆಗಳ ಮೆರವಣಿಗೆ ಜನಮನ ಸೆಳೆಯಿತು. ಮೆರವಣಿಗೆಯು ಜಗತ್ ವೃತ್ತಕ್ಕೆ ಬಂದಾಗ ಮತ್ತೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ನಡೆಯಿತು.

ಪಂಡಿತರಂಗಮಂದಿರದಲ್ಲಿ ನಡೆದ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಸುಲಫಲಮಠದ ಮಹಾಂತಶಿವಾಚಾರ್ಯರು ಸೇರಿದಂತೆ ಪೂಜ್ಯರು, ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರೊ. ಎಚ್.ಟಿ ಪೋತೆ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಲ್ಯಾಪ್ ಟಾಪ್ ವಿತರಣೆ, ವಿಕಲಚೇತನ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಸಂಜೆ ನಿಜಶರಣ ಅಂಬಿಗರ ಚೌಡಯ್ಯನವರ ಯುವಕ ಮಂಡಳಿಯಿಂದ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು.

ನಗರೇಶ್ವರ ಶಾಲೆಯಿಂದ ಶುರುವಾದ ರ್‍ಯಾಲಿಗೆ ವಿಪ ಸದಸ್ಯ, ಡಿಸಿ ಫೌಜಿಯಾ ತರನ್ನುಮ್‌, ಶಾಸಕರಾದ ಅಲ್ಲಂಪ್ರಭು ಪಟೀಲ್‌, ಬಸವರಾಜ ಮತ್ತಿಮಡು, ಮಾಜಿ ಶಾಸಕ ಮಾಲೀಕಯ್ಯಾ ಗುತ್ತೇದಾರ್‌, ಸಮಾಜ ಮುಖಂಡರಾದ ತಿಪ್ಪಣಪ್ಪ ಕಮಕನೂರ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ್ ಮೂಲಗೆ ಅಲ್ಲಮಪ್ರಭು ದೇಶಮುಖ ಅವರು ಚಾಲನೆ ನೀಡಿದರು.

ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ್‌, ಮೇಯರ್‌ ವರ್ಷಾ ಜಾನೆ, ಶಿವು ಹೊನಗುಂಟಿ, ಸುಲಫಲ ಶ್ರೀಗಳು ಚಾಲನೆ ನೀಡಿದರು.

ರವಿರಾಜ ಕೋರವಿ, ಸಂದೇಶ ಕಮಕನೂರ, ಸುರೇಶ್ ಕಮಕನೂರ, ಬಸವರಾಜ ಬೂದಿಹಾಳ, ಬಸವರಾಜ ಹರವಾಳ,ವಿಜಯಕುಮಾರ್ ಹದಗಲ್,ರಮೇಶ್ ನಾಟಿಕರ,ರಾಜು ಜಮಾಜದ ಜಂಬಗಾ(ಬಿ) ಅರ್ಜುನ ಜಮಾದಾರ, ರಮೇಶ್ ಜಮಾದಾರ ರಾಕೇಶ್ ಜಮಾದಾರ, ಬೆಳೆಪ್ಪ ಇಂಗಿನಕಲ್, ಸಮಾಜದ ಗಣ್ಯರು ಇದ್ದರು.

ಫೋಟೋ- ಜಯಂತಿ 1

ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ರ್‍ಯಾಲಿ ನಗರೇಶ್ವರ ಶಾಲೆಯಿಂದ ಪಂಡಿತ ರಂಗ ಮಂದಿರವರೆಗೂ ನಡೆದು ಗಮನ ಸೆಳೆಯಿತು.

ಫೋಟೋ- ಜಯಂತಿ 2, ಜಯಂತಿ 3

ಕಲಬುರಗಿಯಲ್ಲಿನ ಅಂಬಿಗರ ಚೌಡಯ್ಯನವರ ರ್‍ಯಾಲಿಗೆ ಡೀಸಿ ಫೌಜಿಯಾ ತರನ್ನುಮ್‌, ಶಾಸಕ ತಿಪ್ಪಣ್ಣ ಕಮಕನೂರ್‌, ಅಲ್ಲಂಪ್ರಭು ಪಾಟೀಲ್‌, ಬಸವರಾಜ ಮತ್ತಿಮಡು ಚಾಲನೆ ನೀಡಿದರು.

ಫೋಟೋ- ಜಯಂತಿ 4

ಕಲಬುರಗಿ ನಗರದಲ್ಲಿಂದು ನಡೆದ ಅಂಬಿಗರ ಚೌಡಯ್ಯನವರ ಬಾವಚಿತ್ರ, ವಚನ ಗ್ರಂಥ ಮೆರವಣಿಗೆ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌