ಕುಷ್ಟಗಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಗುರು ಪುಟ್ಟರಾಜ ಸ್ವರಸಂಗೀತ ಹಾಗೂ ಕಲಾ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕದ ಸಂಘ-ಸಂಸ್ಥೆಗಳ ಧನಸಹಾಯದ ಯೋಜನೆಯಡಿಯಲ್ಲಿ ಜನಪದ ಸಂಗೀತ ಕಲಾ ವೈಭವ ಕಾರ್ಯಕ್ರಮ ಜರುಗಿತು.
ಕಲಾವಿದರ ಸಾಧನೆಯನ್ನು ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿ, ಜನಪದ ಕಲೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಯುವ ಪೀಳಿಗೆಗೆ ಅವುಗಳ ಮಹತ್ವ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.ಸಹನಾ ಮಾಲಿಪಾಟೀಲ, ಮಧು ಹಿರೇಮಠ ವಚನ ಸಂಗೀತ ಗಾಯನ, ಶಿವಲೀಲಾ ಹಿರೇಮಠ ತಂಡದವರು ಶಾಸ್ತ್ರೀಯ ಸಂಗೀತ, ಸೌಜನ್ಯ ಅಂಗಡಿ ತಂಡದವರು ಸುಗಮ ಸಂಗೀತ, ದೇವಪ್ಪ ಟೆಂಗುಂಟಿ ತಂಡದವರು ಜಾನಪದ ಗೀತೆಗಳು, ಭರಮಪ್ಪ ಜಿನ್ನಾಪೂರ ತಂಡದವರು ತತ್ವಪದ, ಶಶಿಕುಮಾರ ಜಾನಪದ ಗೀತೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಗುರುಬಸವನಗೌಡ ಮಾಲಿಪಾಟೀಲ ವಹಿಸಿದ್ದರು. ವಿಶ್ವಕರ್ಮ ಸಮಾಜ ಅಧ್ಯಕ್ಷ ಶರಣಪ್ಪ ಬಡಿಗೇರ, ಸೈಯದ್ ಮುರ್ತುಜಾ ಖಾದ್ರಿ, ಮರಿಯಪ್ಪ ಹಕ್ಕಲ್, ಸಿದ್ದಪ್ಪ ಬಡಿಗೇರ, ಸಿದ್ದಪ್ಪ ಡಿ. ಕಲಾಲಬಂಡಿ, ಮಹಾಂತೇಶ ಅಮರಾವತಿ, ಬೀಬಿಜಾನ್, ಮುದಕವ್ವ ಹೊಸಮನಿ, ಹನುಮೇಶ ಇತರರಿದ್ದರು.