ಪರಿಷ್ಕರಣೆ ನೆಪದಲ್ಲಿ ಕಾಂಗ್ರೆಸ್‌ ಮತಗಳ ಡೀಲಿಟ್‌

KannadaprabhaNewsNetwork |  
Published : Jun 01, 2026, 02:15 AM IST
ಪೋಟೊ31ಕೆಎಸಟಿ2: ಕುಷ್ಟಗಿ ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ನಿವಾಸದಲ್ಲಿ ನಡೆದ ಬೂತ್ ಮಟ್ಟದ ಏಜೇಂಟರು ಹಾಗೂ ಕಾಂಗ್ರೇಸ್ ಮುಖಂಡರ ಸಭೆಯಲ್ಲಿ ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ  ಹಸನಸಾಬ್ ದೋಟಿಹಾಳ  ಮಾತನಾಡಿದರು | Kannada Prabha

ಸಾರಾಂಶ

ಎಸ್ಐಆರ್ ನಲ್ಲಿ ಮತದಾರರು ಪಟ್ಟಿಯಿಂದ ಹೊರಗೆ ಹೋದರೆ ಮುಂದೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಗ್ಯಾರಂಟಿ ಸೌಲಭ್ಯ ಸಹ ಸಿಗುವುದಿಲ್ಲ

ಕುಷ್ಟಗಿ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಮತದಾರರು ಹೊರಗುಳಿಯದಂತೆ ಕಾಂಗ್ರೆಸ್‌ ಪಕ್ಷದ ಬೂತ್ ಮಟ್ಟದ ಏಜೆಂಟರು,ಪಕ್ಷದ ಮುಖಂಡರು ಎಚ್ಚರಿಕೆ ವಹಿಸಿ ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಮಾಜಿ ಶಾಸಕ ಹಸನಸಾಬ ದೋಟಿಹಾಳ ಹೇಳಿದರು.

ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ನಿವಾಸದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯ ನಿಮಿತ್ತ ನಡೆದ ಬೂತ್ ಮಟ್ಟದ ಏಜೆಂಟರ್‌ ಹಾಗೂ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಎಸ್ಐಆರ್ ನಲ್ಲಿ ಮತದಾರರು ಪಟ್ಟಿಯಿಂದ ಹೊರಗೆ ಹೋದರೆ ಮುಂದೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಗ್ಯಾರಂಟಿ ಸೌಲಭ್ಯ ಸಹ ಸಿಗುವುದಿಲ್ಲ ಪ್ರತಿಯೊಬ್ಬ ನಾಗರಿಕರು ಎಸ್‌ಐಆರ್ ಬಗ್ಗೆ ತಿಳಿದು ಮತದಾರರ ಪಟ್ಟಿಯಿಂದ ಹೊರಗಡೆ ಹೋಗದಂತೆ ಜಾಗ್ರತೆ ವಹಿಸಬೇಕು ಎಂದರು.

ಪಕ್ಷದ ಬೂತ್ ಮಟ್ಟದ ಏಜೆಂಟರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದುವ ಮೂಲಕ ಮತದಾರರ ಬಗ್ಗೆ ಮಾಹಿತಿ ಪಡೆದುಕೊಂಡು ವಲಸೆ ಹೋಗಿರುವ ಮತದಾರರಿಗೆ ಪೋನ್ ಮೂಲಕ ಸಂಪರ್ಕ ಮಾಡಿ ಅವರನ್ನು ಕರೆಯಿಸಿ ಫಾರಂ ಭರ್ತಿ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರುಳಿಯುವಂತೆ ಮಾಡಬೇಕು ಎಂದರು.

ಈವರೆಗೆ ದೇಶದ 13 ರಾಜ್ಯಗಳಲ್ಲಿ ಎಸ್ಐಆರ್ ನಡೆದಿದ್ದು, 6.5 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರ ಹಾಕಲಾಗಿದೆ. ಇದರಲ್ಲಿ ಶೇ.1 ರಷ್ಟು ಮೃತಪಟ್ಟವರಿದ್ದರೂ 5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಬಿಹಾರದಲ್ಲಿ 62 ಲಕ್ಷ, ಪಶ್ಛಿಮ ಬಂಗಾಳದಲ್ಲಿ 91 ಲಕ್ಷ, ಉತ್ತರ ಪ್ರದೇಶದಲ್ಲಿ 2.3 ಕೋಟಿ ಜನ ತಮ್ಮ ಮತ ನೀಡುವ ಹಕ್ಕನ್ನು ಕಳೆದುಕೊಂಡಿದ್ದಾರೆ ಆದ್ದರಿಂದ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರಿ ವರ್ಗ ವಲಸೆ ಹೋಗಿರುವ ಮತದಾರರನ್ನು ಡೀಲಿಟ್ ಮಾಡುವ ಸಾಧ್ಯತೆಯಿದ್ದು ಕಾಂಗ್ರೆಸ್‌ ಪಕ್ಷದಿಂದ ನೇಮಕಗೊಂಡಿರುವ ಬೂತ್ ಮಟ್ಟದ ಏಜೆಂಟರು ಅಂತಹ ಮತದಾರರನ್ನು ಕರೆಯಿಸಿ ಫಾರಂ ಭರ್ತಿ ಮಾಡುವ ಕೆಲಸ ಮಾಡಬೇಕು. ಸಕ್ರಿಯವಾಗಿ ಭಾಗವಹಿಸಬೇಕು ಬಿಜೆಪಿಯವರ ಕಣ್ಣು ನಮ್ಮ ಪಕ್ಷದ ಮತಗಳಾದ ಎಸ್ಸಿ ಎಸ್ಟಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಮತಗಳ ಮೇಲೆ ಬಿದ್ದಿದ್ದು ಕಾರ್ಯಕರ್ತರು ಮುಖಂಡರು ಮುತುವರ್ಜಿ ಕೆಲಸ ಮಾಡಬೇಕಿದೆ ಎಂದರು.

ಕಾಂಗ್ರೆಸ್‌ ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ನಮ್ಮ ಮತವು ಮೂಲಭೂತ ಹಕ್ಕಾಗಿದ್ದು, ಅದನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮದಾಗಿದೆ. ಬೂತ್ ಮಟ್ಟದ ಏಜೆಂಟರಿಗೆ ತಾಲೂಕು ಮತ್ತು ಹೋಬಳಿಯಲ್ಲಿ ತರಬೇತಿ ನೀಡಲಾಗುವದು ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಹೊಸ ಮತದಾರರನ್ನು ಸೇರಿಸುವ ಅವಕಾಶವಿದೆ ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಏಜೆಂಟರು ಉತ್ತಮ ಕೆಲಸ ಮಾಡಬೇಕು ಎಂದರು.

ಶೇಖರಗೌಡ ಮಾಲಿಪಾಟೀಲ, ಮಾಲತಿ ನಾಯಕ, ಲಾಡ್ಲೇಮಷಾಕ್ ದೋಟಿಹಾಳ, ಮೈನೂದ್ದಿನ್ ಮುಲ್ಲಾ, ಯಂಕಪ್ಪ ಚವ್ಹಾಣ, ವಸಂತ ಮೇಲಿನಮನಿ, ಶಂಕರಗೌಡ ವಕೀಲರು ಸೇರಿದಂತೆ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ಕಲ್ಲಪ್ಪ ತಳವಾರ, ಯಲ್ಲಪ್ಪ ಬಾಗಲಿ, ಆಯಿಶಾಖಾನ್, ಶಾರದಾ ಕಟ್ಟಿಮನಿ, ದೊಡ್ಡಯ್ಯ ಗದ್ದಡಕಿ, ಕೇದಾರನಾಥ ತುರಕಾಣಿ, ಇಮಾಮಸಾಬ ಗರಡಿಮನಿ ಸೇರಿದಂತೆ ಅನೇಕರು ಇದ್ದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು, ಬೂತ್ ಮಟ್ಟದ ಏಜೆಂಟರು ಇದ್ದರು.

ಮತದಾರರ ಪಟ್ಟಿ ಪರಿಷ್ಕರಣೆಯಿಂದ ಮಮತಾ ಬ್ಯಾನರ್ಜಿ ಸೋಲಾಯಿತು. ಬಿಜೆಪಿಗರು ಕಾಂಗ್ರೆಸ್‌ ಮತಗಳ ಮೇಲೆ ಕಣ್ಣಿಟ್ಟಿದ್ದು ಅವುಗಳನ್ನು ಕಾಪಾಡುವದು ಪ್ರತಿಯೊಬ್ಬಕಾಂಗ್ರೆಸ್‌ ಕಾರ್ಯಕರ್ತನ ಪ್ರಮುಖ ಜವಾಬ್ದಾರಿಯಾಗಿದೆ. ನಿಷ್ಟೆಯಿಂದ ಕೆಲಸ ಮಾಡಬೇಕು ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಪರವಾಗಿ ಹಂಪಿಯಲ್ಲಿ ಕಾಂಗ್ರೆಸ್‌ನಿಂದ ಪೂಜೆ
ವಿಜಯನಗರ ಜಿಲ್ಲೆಯಲ್ಲಿ ಇಂದಿನಿಂದ 1612 ಶಾಲೆ ಆರಂಭ