ಬಳ್ಳಾರಿ: ಸಾಧಕರು ಎಂದಿಗೂ ಮರೆಯಾಗುವುದಿಲ್ಲ. ಅವರು ದೇಹತಃ ಇಲ್ಲದಿದ್ದರೂ ಜನರ ನಾಲಿಗೆ ಮತ್ತು ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ ಎಂಬುದಕ್ಕೆ ತೊಗಲುಗೊಂಬೆ ಮಾಂತ್ರಿಕ ಬೆಳಗಲ್ಲು ವೀರಣ್ಣನವರ ಬದುಕೇ ಸಾಕ್ಷಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಬಣ್ಣಿಸಿದರು.
ಸಮಾಜದಲ್ಲಿ ಮಹತ್ತರ ಸಾಧನೆ ಮಾಡಿದವರು ತಮ್ಮ ಜೀವನಕಾಲದಲ್ಲಿಯೇ ಆದರ್ಶಗಳನ್ನು ನಿರ್ಮಿಸಿ, ಇತರರಿಗೆ ದಾರಿದೀಪವಾಗುತ್ತಾರೆ. ಪರಿಶ್ರಮ, ದೃಢಸಂಕಲ್ಪ ಮತ್ತು ನಿಷ್ಠೆಯಿಂದ ಸಾಧನೆ ಮಾಡಿದವರು ಸಮಾಜದ ನೆನಪಿನಲ್ಲಿ ಸದಾಕಾಲ ಉಳಿಯುತ್ತಾರೆ. ಬೆಳಗಲ್ಲು ವೀರಣ್ಣನವರು ತಮ್ಮ ಇಡೀ ಬದುಕನ್ನು ತೊಗಲುಗೊಂಬೆ ಕಲಾ ಪ್ರಕಾರದ ಬೆಳವಣಿಗೆಗೆ ಸವೆಸಿದರು. ಅತ್ಯಂತ ಸಂಕಷ್ಟ ಕಾಲದಲ್ಲೂ ತೊಗಲುಗೊಂಬೆ ಕಲೆಯಿಂದ ದೂರ ಉಳಿಯದಂತೆ ಅಪರೂಪದ ಕಲಾ ಪ್ರಕಾರದ ಉಳಿವಿಗೆ ಅಪರಿಮಿತವಾಗಿ ಶ್ರಮಿಸಿದರು. ನಾಡಿನ ಸಾಂಸ್ಕೃತಿಕ ಹೆಜ್ಜೆ ಗುರುತಂತಿರುವ ವೀರಣ್ಣನಂತಹ ಮಹನೀಯನನ್ನು ಸದಾ ಸ್ಮರಿಸುವ ಕೆಲಸ ಬೆಳಗಲ್ಲು ಹನುಮಂತು ದಂಪತಿ ಮಾಡುತ್ತಿರುವುದು ಸ್ಮರಣೀಯ ಕಾರ್ಯ. ಮಕ್ಕಳಾದವರು ತಂದೆ-ತಾಯಿಗಳಿಗೆ ಗುಡಿ-ಗುಂಡಾರಗಳನ್ನು ನಿರ್ಮಿಸಬೇಕಾಗಿಲ್ಲ. ಎದೆಯಲ್ಲಿಟ್ಟುಕೊಂಡು ಪೂಜಿಸಿದರೆ ಸಾಕು. ಎದೆಯ ಗೂಡಿಗಿಂತ ದೊಡ್ಡ ಗುಡಿ ಮತ್ತೊಂದಿಲ್ಲ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಅವರು ಬೆಳಗಲ್ಲು ವೀರಣ್ಣನವರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಬೆಳಗಲ್ಲು ವೀರಣ್ಣನವರ ಸ್ಮಾರಕ ಪ್ರಶಸ್ತಿ ಸಮಾರಂಭ ನೋಡಿ ಕಣ್ತುಂಬಿ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲಾಡಳಿತ ನಡೆಸುವ ಸಮಾರಂಭಗಳು ಸಾಂಕೇತವಾಗಿರುತ್ತವೆ. ಯಾಂತ್ರೀಕರಣದಂತೆ ಭಾಸವಾಗುತ್ತದೆ. ಜಿಲ್ಲಾಡಳಿತ ಕೈಗೊಳ್ಳುವ ಸಾಂಸ್ಕೃತಿಕ ಸಮಾರಂಭಗಳಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲ. ಲವಲವಿಕೆಯಿಂದ ಪಾಲ್ಗೊಳ್ಳುವುದು ಕಂಡು ಬರುವುದಿಲ್ಲ. ಬೆಳಗಲ್ಲು ವೀರಣ್ಣನವರ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ಅಚ್ಚುಕಟ್ಟುತನದಿಂದ ಕೂಡಿದೆ ಎಂದು ಶ್ಲಾಘಿಸಿದರು.
ಕೆ.ಬಸವಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಆಂಧ್ರಪ್ರದೇಶದ ನಿಮ್ಮಲಕುಂಟ ಶ್ರೀವನಾರ್ಚ ರಾಮಕೃಷ್ಣ ತೊಗಲುಗೊಂಬೆ ಆಟ ಕಲಾ ತಂಡದಿಂದ ಸೀತಾ ಅಪಹರಣ ತೊಗಲುಗೊಂಬೆ ಪ್ರದರ್ಶನ ಜರುಗಿತು.
ಸರ್ಕಾರದಿಂದ ಪ್ರಶಸ್ತಿ ನೀಡಲಿ: