ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಬೊಮ್ಮೂರು ಅಗ್ರಹಾರದ ಬಯಲು ಪ್ರದೇಶದಲ್ಲಿ ದನ-ಕರು, ಆಡು, ಕುರಿಗಳಿಗೆ ಮೈಸೂರ್ ಸ್ಯಾಂಡಲ್ ಸೋಪ್ ನಿಂದ ಸ್ನಾನ ಮಾಡಿಸಿದ ಕಾರ್ಯಕರ್ತರು, ಮೈಸೂರ್ ಸ್ಯಾಂಡಲ್ ಸೋಪ್ಗೆ ತನ್ನದೇ ಆದ ಇತಿಹಾಸವಿದೆ. ಸೋಪ್ನ ರಾಯಭಾರಿಗೆ ಕನ್ನಡದ ನಟ, ನಟಿ ಹಾಗೂ ಕ್ರೀಡಾಪಟುಗಳನ್ನು ಬಳಸಿಕೊಳ್ಳಬಹುದು. ಅದು ಬಿಟ್ಡು ರಾಜ್ಯ ಸರ್ಕಾರ ಪರಭಾಷಾ ನಟಿಗೆ 6.20 ಕೋಟಿ ರು. ವ್ಯಯಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಸರ್ಕಾರ ಈ ತೀರ್ಮಾನವನ್ನು ಕೂಡಲೇ ಕೈ ಬಿಟ್ಟು ಮೈಸೂರಿನ ಪ್ರತಿಭೆಗಳು ಅಥವಾ ರಾಜ್ಯದ ನಟ- ನಟಿಯರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಆ ಸೋಪ್ ಅನ್ನು ನಾವೇ ಬಹಿಷ್ಕರಿಸಿ ಧನ ಕರುಗಳ ಸ್ನಾನಕ್ಕೆ ಬಳಸುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು, ಜಗಧೀಶ್, ರಂಗಶೆಟ್ಡಿ, ಮನೋಜ್, ಛಾಯಾ, ಜಯಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.ಜೂ.1ರಂದು ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಸೇವಾ ಟ್ರಸ್ಟ್ ಉದ್ಘಾಟನೆ
ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಜೂ.1ರಂದು ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಸೇವಾ ಚಾರಿಟಬಲ್ ಟ್ರಸ್ಟ್ನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎಸ್.ಚೌಡೇಶ್ ತಿಳಿಸಿದ್ದಾರೆ.ಟ್ರಸ್ಟ್ ಉದ್ಘಾಟನೆ ಅಂಗವಾಗಿ ಶಾಂತಿ ಕಾಲೇಜು ಆವರಣದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆವರೆಗೆ ಬೃಹತ್ ಉಚಿತ ಮಹಿಳಾ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯದಿಂದ ತಪಾಸಣೆ, ಔಷಧಿ ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಲಾಗಿದೆ.
ಅತಿಥಿಗಳಾಗಿ ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ, ಮಾಜಿ ಶಾಸಕಿ ಎಂ.ಕೆ.ನಾಗಮಣಿ ನಾಗೇಗೌಡ, ಹಿರಿಯ ರಂಗಭೂಮಿ ಕಲಾವಿದ, ಉದ್ಯಮಿ ಪಟೇಲ್ ಗಂಗರಾಜು, ಸಂಸ್ಥೆ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಪುಟ್ಟರಾಜು, ಹರಿಕಥೆ ವಿದ್ವಾಂಸ ಬದನವಾಳು ಶಿವಕುಮಾರ ಶಾಸ್ತ್ರಿ, ಅಂತಾರಾಷ್ಟ್ರೀಯ ಕಂಸಾಳೆ ಕಲಾವಿದ ಕಂಸಾಳೆ ಮಹದೇವಯ್ಯ, ಹರಿಕಥಾ ವಿದ್ವಾಂಸ ಶಿವಾರ ಉಮೇಶ್, ಗುತ್ತಿಗೆದಾರ ಗೋವಿಂದರಾಜು, ಜನವಾದಿ ಮಹಿಳಾ ಸಂಘಟನೆಯ ಸುಶೀಲಾ, ಪ್ರಮುಖರಾದ ರೇಣುಕಾ ಆರಾಧ್ಯ, ಗುರುಮಲ್ಲಯ್ಯ, ವಿಜಯಕುಮಾರ್, ಚಿಂದಗಿರಿಗೌಡ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.