ಸುಳ್ಳು ಜಾತಿ ಪತ್ರ ನೀಡಿ ವಂಚನೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದಸಂಸ ಪ್ರತಿಭಟನೆ

KannadaprabhaNewsNetwork |  
Published : Dec 18, 2024, 12:46 AM IST
17ಕೆಎಂಎನ್ ಡಿ34 | Kannada Prabha

ಸಾರಾಂಶ

ಸುಳ್ಳು ಜಾತಿಯ ಪತ್ರ ನೀಡಿ ಶಾಸಕರಾಗುವ ಮೂಲಕ ನೈಜ ಪರಿಶಿಷ್ಟರ ಮೀಸಲಾತಿ ಹಕ್ಕು- ಅವಕಾಶಗಳ ವಂಚನೆ ಮಾಡಿದ್ದಾರೆ. ಇವರ ಕೋಲಾರ ಜಿಲ್ಲಾಧಿಕಾರಿಗಳ ಸಮಿತಿ ವರದಿ ಎತ್ತಿ ಹಿಡಿದು ಶಾಸಕ ಸ್ಥಾನವನ್ನು ರಾಜ್ಯ ಉಚ್ಚ ನ್ಯಾಯಲಯದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶಿಸಿರುವುದನ್ನು ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸುಳ್ಳು ಜಾತಿ ಪತ್ರ ನೀಡಿ ಕಾಂಗ್ರೆಸ್ ಶಾಸಕರಾಗಿ ಕೊತ್ತೂರು ಮಂಜುನಾಥ್ ಆಯ್ಕೆಯಾಗಿ ನೈಜ ಪರಿಶಿಷ್ಟರ ಮೀಸಲಾತಿ ಹಕ್ಕು- ಅವಕಾಶಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು, ಸುಳ್ಳು ಜಾತಿ ಪತ್ರ ನೀಡಿ ಶಾಸಕರಾಗಿರುವ ಕೊತ್ತೂರು ಮಂಜುನಾಥ್ ಅವರನ್ನು ಬಂಧಿಸಿ, ಪರಿಶಿಷ್ಟರ ಮೀಸಲಾತಿ ಹಕ್ಕು ಅವಕಾಶಗಳ ವಂಚನೆ ತಡೆ ಕಾಯ್ದೆ ಜಾರಿ ಮಾಡಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಹಿಂದುಳಿದ ಪವರ್ಗ-1ಕ್ಕೆ ಸೇರಿರುವ ಬೈರಾಗಿ ಜನಾಂಗದ ಕೊತ್ತೂರು ಮಂಜುನಾಥ್ ಕೋಲಾರ ಜಿಲ್ಲೆ ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಬುಡಗ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ಖಂಡಿಸಿದರು.

ಸುಳ್ಳು ಜಾತಿಯ ಪತ್ರ ನೀಡಿ ಶಾಸಕರಾಗುವ ಮೂಲಕ ನೈಜ ಪರಿಶಿಷ್ಟರ ಮೀಸಲಾತಿ ಹಕ್ಕು- ಅವಕಾಶಗಳ ವಂಚನೆ ಮಾಡಿದ್ದಾರೆ. ಇವರ ಕೋಲಾರ ಜಿಲ್ಲಾಧಿಕಾರಿಗಳ ಸಮಿತಿ ವರದಿ ಎತ್ತಿ ಹಿಡಿದು ಶಾಸಕ ಸ್ಥಾನವನ್ನು ರಾಜ್ಯ ಉಚ್ಚ ನ್ಯಾಯಲಯದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶಿಸಿರುವುದನ್ನು ಸ್ವಾಗತಿಸಿದರು. ಕೂಡಲೇ ಕೊತ್ತೂರು ಮಂಜುನಾಥ್ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ವಿಚಾರ ತಿಳಿದು ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಹಾಗೂ ಶಾಸಕ ಸ್ಥಾನದಿಂದ ವಜಾ ಮಾಡಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟರ ಮೀಸಲಾತಿ ಹಕ್ಕು ಅವಕಾಶಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಂಸಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್ ಕುಮಾರ್ , ಜಿಲ್ಲಾಧ್ಯಕ್ಷ ಬಿ.ಆನಂದ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಹೊಳಲು ಹರಿಕುಮಾರ್, ಸಿದ್ದಯ್ಯ ದೊ.ಬೂವಹಳ್ಳಿ, ಸುಷ್ಮಿತಾ ಆನಂದ್, ಗೀತಾ, ಕುಮಾರ್ ಮಳವಳ್ಳಿ, ಮಹದೇವ ಕೊತ್ತತ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ