ಶಿವಕುಮಾರ ಕುಷ್ಟಗಿ
ಹೇಳಲಾರದ ಸಮಸ್ಯೆಗಳು: ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವು ಪ್ರತಿನಿತ್ಯದ ನಿಗದಿತ ಗುರಿಗಿಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿರುವುದು ಸಮೀಕ್ಷೆಯಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿ ಇರಲು ಕಾರಣವಾಗಿದೆ. ಆದರೆ ಸಮೀಕ್ಷೆ ತೆರಳುವ ಸಿಬ್ಬಂದಿಗೆ ಕುಟುಂಬಸ್ಥರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ. ಮುಖ್ಯವಾಗಿ ಮನೆಗಳ ಹುಡುಕಾಟದಲ್ಲಿ ಆಗುತ್ತಿರುವ ತೊಂದರೆ, ಸಮೀಕ್ಷೆ ವೇಳೆ ಕುಟುಂಬಸ್ಥರಿಂದ ಎದುರಾಗುತ್ತಿರುವ ಅನಿರೀಕ್ಷಿತ ಪ್ರಶ್ನೆಗಳು, ಇದಕ್ಕೆಲ್ಲಾ ಉತ್ತರಿಸಿ ಅವರನ್ನು ಮಾಹಿತಿ ನೀಡಲು ಒಪ್ಪಿಸುವುದರೊಳಗಾಗಿ ಗಣತಿ ಸಿಬ್ಬಂದಿ ಹೈರಾಣಾಗಿದ್ದಾರೆ. ಇದರೊಟ್ಟಿಗೆ ಸಮೀಕ್ಷೆಗೆ ತೆರಳಿದ ಕೆಲವೆಡೆ ಸಿಬ್ಬಂದಿ ನಾಯಿ ಕಡಿತಕ್ಕೂ ಒಳಗಾಗಿದ್ದಾರೆ.ತಾಂತ್ರಿಕ ಸಮಸ್ಯೆ ನಿವಾರಣೆ: ಸಮೀಕ್ಷಾ ಕಾರ್ಯದ ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಪ್ರಗತಿಗೆ ಅಡಚಣೆಯಾಗಿದ್ದವು. ಆದರೆ, ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ತಾಂತ್ರಿಕ ಸಮಸ್ಯೆಗಳು ಬಹುತೇಕ ಬಗೆಹರಿದಿರುವುದರಿಂದ ಸಮೀಕ್ಷಾ ಕಾರ್ಯವು ಗಣನೀಯ ವೇಗ ಪಡೆದುಕೊಂಡಿದೆ. ಆದರೆ ಡೇಟಾ ಮತ್ತು ನೆಟ್ವರ್ಕ್ ಸಮಸ್ಯೆ ಕೂಡಾ ಎದುರಾಗುತ್ತಿದ್ದು, ಇದರ ಪರಿಹಾರಕ್ಕೂ ಅಧಿಕಾರಿಗಳು ಗಮನ ನೀಡಬೇಕಿದೆ.
ಮೌಖಿಕ ಎಚ್ಚರಿಕೆರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ, ಸಮೀಕ್ಷಾ ಕಾರ್ಯದ ಬಗ್ಗೆ ಅಸಡ್ಡೆ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಅಂಥ ಒಂದೇ ಒಂದು ಘಟನೆ ನಡೆದಿಲ್ಲ. ಕೇವಲ ಮೌಖಿಕ ಸೂಚನೆ ಮೇರೆಗೆ ಸಿಬ್ಬಂದಿಗಳಿಂದ ಕೆಲಸ ಪಡೆಯುವಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿರುವುದು ಸಂತಸದ ಸಂಗತಿ.2600 ಸಿಬ್ಬಂದಿ ಬಳಕೆಸಮೀಕ್ಷೆಯನ್ನು ತ್ವರಿತವಾಗಿ ಮತ್ತು ನಿಖರವಾಗಿ ನಡೆಸಲು ಜಿಲ್ಲೆಯಲ್ಲಿ ಒಟ್ಟು 2600 ಜನ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಆದರೆ, ಗರ್ಭಿಣಿಯರು, ನಿವೃತ್ತಿಯ ಅಂಚಿನಲ್ಲಿರುವವರು ಮತ್ತು 100ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ.
ಪ್ರಗತಿ ಉತ್ತಮ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರಗತಿ ಉತ್ತಮವಾಗಿದೆ. ಆರಂಭದಿಂದಲೂ ರಾಜ್ಯದ ಮುಂಚೂಣಿ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆದುಕೊಂಡಿದ್ದು, ನಿಗದಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್. ತಿಳಿಸಿದರು.