ಮೆಣಸಿನಹಾಡ್ಯದ ಕಲ್ಲುಗುಡ್ಡೆಯಲ್ಲಿ ಶ್ರೀ ಜಲದುರ್ಗಾಪರಮೇಶ್ವರಿ, ಚೌಡೇಶ್ವರಿ ಪುನರ್ ಪ್ರತಿಷ್ಠೆ ವೇಳೆ ಆಶೀರ್ವಚನ
ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಪಾವಿತ್ರ್ಯತೆಯಿಂದ ಕೂಡಿದ ಸಣ್ಣಸಣ್ಣ ದೇವಾಲಯದ ದರ್ಶನ ಗಳಿಂದಲೂ ಪುಣ್ಯ ಪ್ರಾಪ್ತಿಯಾಗುವುದು ಎಂದು ಶ್ರೀಕ್ಷೇತ್ರ ಆದಿ ಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಮೇಗುಂದ ಹೊಬಳಿ ಬಸ್ರಿಕಟ್ಟೆ ಸಮೀಪದ ಮೆಣಸಿನಹಾಡ್ಯದ ಕಲ್ಲುಗುಡ್ಡೆಯಲ್ಲಿ ಶ್ರೀ ಜಲದುರ್ಗಾಪರಮೇಶ್ವರಿ ಮತ್ತು ಚೌಡೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠೆ ನೇರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು. ದೇವಾಲಯಗಳನ್ನು ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಪದ್ಧತಿ ನಮ್ಮ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು.
ಪ್ರಕೃತಿ ನಡುವೆ ಮೈದುಂಬಿ ಹರಿಯುವ ಹಳ್ಳದ ಬದಿಯಲ್ಲಿ ಪುನರ್ ಪ್ರತಿಷ್ಠಾಪನೆಗೊಂಡಿರುವ ಜಲದುರ್ಗಾದೇವಿ ಶಕ್ತಿಯುತ ದೇವಿಯಾಗಿದ್ದಾಳೆ ಎನ್ನುವ ನಂಬಿಕೆ ನನ್ನದು. ಊರಿಗೊಂದು ನದಿ ಮತ್ತು ಗುರುವಿನ ಸಾನಿಧ್ಯವಿರ ಬೇಕು. ಪ್ರಸ್ತುತ ಕಾಲ ಘಟ್ಟದಲ್ಲಿ ಹಳ್ಳಿಯ ಜೀವನ ತೊರೆದು ನಗರ ಜೀವನಕ್ಕೆ ಮನಸೋತು ಅನೇಕರು ನಗರಗಳತ್ತ ವಲಸೆ ಹೋಗಿ ಜೀವನ ಕಂಡುಕೊಂಡಿದ್ದಾರೆ. ನಗರಗಳಲ್ಲಿ ಸಾಕಷ್ಟು ಕೆಲಸವೂ ಇದೆ. ಕೈತುಂಬಾ ಹಣ ಸಂಪಾದನೆಯೂ ಆಗುತ್ತದೆ. ಅದೇ ರೀತಿ ಕಲುಷಿತ ವಾತಾವರಣದಿಂದ ಮೈತುಂಬ ಕಾಯಿಲೆಗಳು ತುಂಬಿಕೊಳ್ಳುತ್ತದೆ. ಸುಂದರ ಪ್ರಕೃತಿ ನಡುವೆ ವಾಸಿಸುತ್ತಿರುವ ನೀವುಗಳು ಪುಣ್ಯವಂತರು. ಇಲ್ಲಿಯ ಕಲುಷಿತವಲ್ಲದ ವಾತಾವರಣ ನಿಮ್ಮ ಆರೋಗ್ಯವನ್ನು ಸದಾ ಕಾಪಾಡುತ್ತದೆ ಎಂದರು. ಕಲ್ಲುಗುಡ್ಡೆಯ ಜಲದುರ್ಗಾ ಪರಮೇಶ್ವರಿ ಸೇವಾ ಸಮಿತಿ ಹಮ್ಮಿಕೊಂಡ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೇವಾ ಸಮಿತಿ ಮತ್ತು ಗ್ರಾಮಸ್ಥರು ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ನೀಡಿ ಗ್ರಾಮಕ್ಕೆ ಬರಮಾಡಿಕೊಂಡರು. ಗಿರಿಜನ ಮುಖಂಡರಾದ ಗಿರಿಯಪ್ಪ, ಎನ್.ಟಿ. ಗೋಪಾಲಕೃಷ್ಣ ಸೇರಿದಂತೆ ಜಲದುರ್ಗಾಪರಮೇಶ್ವರಿ ಸೇವಾ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು.-- ಬಾಕ್ಸ್--
ಗಿರಿಜನ ಮುಖಂಡ,
ಅಧ್ಯಕ್ಷರು ಅತ್ತಿಕೊಡಿಗೆ ಗ್ರಾ.ಪಂ. ಮೆಣಸಿನಹಾಡ್ಯ