ವಿಶ್ವದ ಗಮನ ಸಳೆದ ಗಾಂಧೀಜಿ: ಪ್ರೊ.ಮ.ಲ.ನ.ಮೂರ್ತಿ

KannadaprabhaNewsNetwork |  
Published : Oct 10, 2025, 01:00 AM IST
ಮಧುಗಿರಿಯ ಟಿವಿವಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧಿಜಿ ಆತ್ಮಕಥನದ ಶತಮಾನದ ಆಚರಣೆಯಲ್ಲಿ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಗಾಂಧಿಜಿಯವರ ಆತ್ಮಕಥನ ಪ್ರಕಟವಾಗಿ ಭಾರತೀಯರ ವಿಶ್ವದ ಗಮನ ಸಳೆದ 100 ವರ್ಷಗಳಾಗಿವೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ತಿಳಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ಗಾಂಧಿಜಿಯವರ ಆತ್ಮಕಥನ ಪ್ರಕಟವಾಗಿ ಭಾರತೀಯರ ವಿಶ್ವದ ಗಮನ ಸಳೆದ 100 ವರ್ಷಗಳಾಗಿವೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ತಿಳಿಸಿದರು.

ಪಟ್ಟಣದ ಟಿವಿವಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧೀಜಿ ಆತ್ಮಕಥನದ ಶತಮಾನದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ,ಅಂತರಂಗದ ವೀಕ್ಷಣೆಗೆ ಒಳಗಾಗಿದ್ದಾರೆ. ಅವರ ಮಾತುಗಳಲ್ಲಿ ಆತ್ಮವಲೋಕನವಿದೆ. ತಮ್ಮ ಬದುಕಿನ ಸಮಸ್ತ ಸತ್ಯಗಳನ್ನು ದಾಖಲಿಸಿದ್ದಾರೆ ಎಂದು ಭಾವಿಸಲಾಗಿದೆ. ಅವರು ತಮ್ಮ ಅನುಭವಗಳನ್ನು ತಮಗೆ ತಾವೆ ಹೇಳಿಕೊಂಡಂತೆ ಬರೆದಿದ್ದಾರೆ.

ಗಾಂಧಿ ಅವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಆದರ್ಶವುಳ್ಳವರಾಗಿದ್ದರು. ಅವರು ಸ್ನೇಹಿತರ ಜೊತೆಗೆ ಸಿಗರೇಟ್‌ ಸೇದಿದ್ದು, ಮಾಂಸ ತಿಂದಿದ್ದು, ಅಪ್ಪನ ಜೇಬಿನಿಂದ ಹಣ ಕದ್ದಿದ್ದು ಎಲ್ಲವನ್ನು ದಾಖಲಿಸಿದ್ದಾರೆ. ತಾಯಿ-ತಂದೆ ಹಿರಿಯರು ಅವರ ಕಟ್ಟುಪಾಡುಗಳ ಬಗ್ಗೆ ಕೂಡ ಬರೆದಿದ್ದಾರೆ. ಅವರು ಗಾಳಿ, ಬೆಳಕು,ಈ ನೆಲ, ಜಲದೊಂದಿಗೆ ಬೆರೆತು ಭಾರತೀಯರಲ್ಲದೆ ವಿಶ್ವದ ಎಲ್ಲರ ಗಮನ ಸಳೆದಿದ್ದಾರೆ ಎಂದರು.

ಗ್ರಂಥಪಾಲಕ ನಾಗಭೂಷಣ್‌ ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ. ಪುಸ್ತಕದ ಪ್ರತಿಯೊಂದು ಜೀವ ರಾಶಿಯಲ್ಲಿ ತನ್ನನ್ನು ತಾನು ನೋಡುತ್ತೇನೆ. ಅಹಿಂಸೆ, ಉಪವಾಸ, ಸತ್ಯಾಗ್ರಹ, ಸ್ವಚ್ಛತೆ ಪ್ರತಿಯೊಬ್ಬರು ಸ್ವತಂತ್ರವಾಗಿ ಬದುಕಬೇಕು ಎಂದರು.

ಉಪನ್ಯಾಸಕ ಮಂಜುಪ್ರಸಾದ್ ಮಾತನಾಡಿ, ಗಾಂಧಿಧೀಜಿ ಭಾರತ ಸ್ವತಂತ್ರ ಹೋರಾಟದ ಶ್ರೇಷ್ಠ ನಾಯಕರಾಗಿದ್ದು. ಅವರ ಜೀವನದ ತತ್ವ ಸಿದ್ಧಾಂತಗಳ ಮೂಲಕ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿನ ಯುವಕರು ಅವರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಸುಭದ್ರವಾಗಿ ಕಟ್ಟುವಲ್ಲಿ ಮತ್ತೆ ಗಾಂಧಿ ಹುಟ್ಟಿ ಬರಲು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿ, ಗಾಂಧೀಜಿ ಹೋರಾಟದ ಹಾದಿಯ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸತೀಶ್‌, ದಾಸಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ