ಕನ್ನಡಪ್ರಭ ವಾರ್ತೆ, ಕಡೂರು
ಗಾಂಧೀಜಿಯವರ ತತ್ವಗಳು ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ. ಅವರ ಪ್ರತಿಮೆ ಅಮೇರಿಕಾ, ಲಂಡನ್,ಆಫ್ರಿಕಾ ದಂತಹ ದೇಶಗಳಲ್ಲಿ ಅನಾವರಣ ಮಾಡಿರುವುದೇ ಸಾಕ್ಷಿ ಎಂದರು.
ಲಕ್ಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರನಾಯ್ಕ ಮಾತನಾಡಿ, ಕೆಪಿಸಿಸಿ ಆದೇಶದಂತೆ ಗಾಂಧಿ ನೆನಪು ಕಾರ್ಯಕ್ರಮದಡಿ ಗ್ರಾಮದಲ್ಲಿ ಜಾಥಾ, ಅಯ್ಯನ ಕೆರೆಯಲ್ಲಿ ಸ್ವಚ್ಛತೆ ಮತ್ತು ಕಾರ್ಯಕರ್ತರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧೀಜಿಯವರ ಸರಳ ಜೀವನವೇ ನಮಗೆ ಆದರ್ಶ. ಕಾಂಗ್ರೆಸ್ ಕಾರ್ಯಕರ್ತರು ಈ ನಿಟ್ಟಿನಲ್ಲಿ ಅವರ ಅದರ್ಶ ಪಾಲಿಸಬೇಕು ಎಂದರು.ಎಪಿಎಂಸಿ ಮಾಜಿ ಸದಸ್ಯ ಪಿಳ್ಳೇನಹಳ್ಳಿ ಲೊಕೇಶ್ ಮಾತನಾಡಿ, 155 ನೇ ಜಯಂತಿಯಾದರೂ ನಾವು ಅದೇ ಹುಮ್ಮಸ್ಸಿನಿಂದ ಆಚರಿಸುತ್ತಿದ್ದೇವೆ ಎಂದರೆ ಅವರ ಆದರ್ಶಗಳೇ ಕಾರಣ ಎಂದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ರುದ್ರಮೂರ್ತಿ, ಅಮೀರ್, ನಟರಾಜ್, ಮಂಜುನಾಥ್, ರಘು, ಸಚ್ಚಿನ್, ಅಜ್ಜಯ್ಯ, ಕಿರಣ್, ಎನ್ ಡಿ ಚಂದ್ರಪ್ಪ, ಮೋಹನನಾಯ್ಕ, ಪಿಳ್ಳೇನಹಳ್ಳಿ ರವಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
3ಕೆಕೆಡಿಯು3. ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 155 ನೇ ಗಾಂಧೀ ಜಯಂತಿ ಆಚರಣೆ ನಡೆಯಿತು.