ಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಂಗಾಧರ ಶಿವಲಿಂಗಪ್ಪ ಗವತಿ, ಉಪಾಧ್ಯಕ್ಷರಾಗಿ ಶಾಲಿನಿ ಸುರೇಂದ್ರ ಶೇರವಿಯವರು 5 ವರ್ಷದ ಅವಧಿಗಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಂಗಾಧರ ಶಿವಲಿಂಗಪ್ಪ ಗವತಿ, ಉಪಾಧ್ಯಕ್ಷರಾಗಿ ಶಾಲಿನಿ ಸುರೇಂದ್ರ ಶೇರವಿಯವರು 5 ವರ್ಷದ ಅವಧಿಗಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಪಿ.ಹೆಗಡೆ ತಿಳಿಸಿದ್ದಾರೆ.
ಈ ವೇಳೆಯಲ್ಲಿ ಬಿಡಿಸಿಸಿ ಬ್ಯಾಂಕ್ ಪಾಶ್ಚಾಪೂರ ವಲಯದ ಬ್ಯಾಂಕ್ ನಿರೀಕ್ಷಕ ಮಹೇಶಕುಮಾರ ನಾಯಕ, ಮುಖ್ಯಕಾರ್ಯನಿರ್ವಾಹಕ ನಾಗೇಂದ್ರ ಪರಕನಹಟ್ಟಿ, ವೃಷಭ ಸುರೇಂದ್ರ ಶೇರವಿ, ರಾಯಪ್ಪ ಮಗದುಮ್ಮ, ನಿಂಗಪ್ಪ ಬಡಿಗೇರ ಹಾಗೂ ಸಿಬ್ಬಂದಿಯಾದ ಗಣೇಶ ಬಡಿಗೇರ, ಆಡಳಿತ ಮಂಡಳಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.