- ರಸ್ತೆ, ಚರಂಡಿ, ಖಾಲಿ ಸೈಟ್ನಲ್ಲಿ ಕಸ ಎಸೆದರೆ, ಬೆಂಕಿ ಹಚ್ಚಿದರೆ ದಂಡ, ಕ್ರಿಮಿನಲ್ ಕೇಸ್: ಪಾಲಿಕೆ ಆಯುಕ್ತ ಎಚ್ಚರಿಕೆ - - -
ದಾವಣಗೆರೆ ಮಹಾನಗರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರವನ್ನಾಗಿಸಲು ಸಾರ್ವಜನಿಕರು ತಮ್ಮ ಮನೆ ಅಥವಾ ಉದ್ದಿಮೆಗಳಲ್ಲಿ ಉತ್ಪತ್ತಿ ಆಗುವಂತಹ ಘನತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲೇ 4 ಬಗೆಯಲ್ಲಿ ಕಸ ವಿಂಗಡಿಸಿ, ಪಾಲಿಕೆಯ ಕಸದ ಗಾಡಿಗೆ ನೀಡಬೇಕು ಎಂದು ಪಾಲಿಕೆ ಆಯುಕ್ತ ಎನ್.ಮಹಾಂತೇಶ ಮಹಾಜನತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಸವನ್ನು ಮೂಲದಲ್ಲೇ 4 ಬಗೆಯಲ್ಲಿ ಕಡ್ಡಾಯವಾಗಿ ವಿಂಗಡಿಸಿ, ನಿಮ್ಮ ಮನೆ ಅಥವಾ ಉದ್ದಿಮೆಗಳ ಮುಂದೆ ಬರುವ ಪಾಲಿಕೆ ಕಸ ಸಂಗ್ರಹದ ವಾಹನಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ, ಅಸಡ್ಡೆ ತೋರಬಾರದು. ದಾವಣಗೆರೆ ಜಿಲ್ಲಾ ಕೇಂದ್ರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರವನ್ನಾಗಿಸಲು ಪಾಲಿಕೆ ಜೊತೆಗೆ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.ತ್ಯಾಜ್ಯವನ್ನು ಪ್ರಮುಖವಾಗಿ 4 ಬಗೆಯಲ್ಲಿ ಮೂಲದಲ್ಲೇ ವಿಂಗಡಿಸಿ, ನೀಡುವುದು ಕಡ್ಡಾಯವಾಗಿದೆ. ಕೊಳೆಯುವ ಹಸಿ ತ್ಯಾಜ್ಯ, ಕೊಳೆಯದ ಒಣ ತ್ಯಾಜ್ಯ (ಮರು ಬಳಕೆಗೆ ಯೋಗ್ಯ ಹಾಗೂ ಯೋಗ್ಯವಲ್ಲದ ದಹನಕಾರಿ ತ್ಯಾಜ್ಯ), ಸ್ಯಾನಿಟರಿ ತ್ಯಾಜ್ಯ (ಬಳಸಿದ ತಕ್ಷಣವೇ ಕಂಪನಿ ಒದಗಿಸಿದ ಪೌಚ್ ಅಥವಾ ಪಾಲಿಕೆ ಸೂಚಿಸಿದ ರೀತಿಯಲ್ಲಿ) ಸುತ್ತಿ ನೀಡಬೇಕು, ವಿಶೇಷ ಆರೈಕೆ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಭಾಗಿಸಿಯೇ ನೀಡುವುದು ಇನ್ನು ಕಡ್ಡಾಯ ಎಂದು ಹೇಳಿದ್ದಾರೆ.
ಅಂತಹ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ಆವರಣದಲ್ಲೇ ಹಸಿ ಕಸವನ್ನು ಸಂಸ್ಕರಿಸಬೇಕು. ಹೀಗೆ ಸಂಸ್ಕರಿಸಿ, ಕಾಂಪೋಸ್ಟ್ ಗೊಬ್ಬರ, ಬಯೋಗ್ಯಾಸ್ ಉತ್ಪಾದನೆ ಮಾಡಬೇಕು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಕೃತ ಪೋರ್ಟಲ್ನಲ್ಲಿ ಬಿಡಬ್ಲ್ಯುಜಿ ಎಂಬುದಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಮತ್ತು ದಂಡವನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
- - -
* ಜನರು ಪಾಲಿಸಬೇಕಾದ ಇತರೆ ಪ್ರಮುಖ ನಿಯಮ - ಬಲ್ಕೀ ತ್ಯಾಜ್ಯಗಳಾದ ತೋಟಗಾರಿಕೆ ಕಸ, ಹಳೆ ಹಾಸಿಗೆ, ದಿಂಬು, ಹಾಸಿಗೆ, ಹೊದಿಕೆ, ಚಾಪೆಗಳನ್ನು ಪ್ರತ್ಯೇಕವಾಗಿ ಹಸ್ತಾಂತರಿಸಬೇಕು.
- 100ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ಆಯೋಜಿಸುವ ಮುನ್ನ ಪಾಲಿಕೆಗೆ ಮಾಹಿತಿ ನೀಡಿ, ಅಗತ್ಯ ಶುಲ್ಕ ಪಾವತಿಸಿ ತ್ಯಾಜ್ಯ ಸಂಗ್ರಹಣಾ ವಾಹನಗಳ ಸೇವೆ ಪಡೆಯಬೇಕು.
- - -
- ಎನ್.ಮಹಾಂತೇಶ, ಆಯುಕ್ತ, ದಾವಣಗೆರೆ ಮಹಾನಗರ ಪಾಲಿಕೆ.
- - --22ಕೆಡಿವಿಜಿ2: ಎನ್.ಮಹಾಂತೇಶ, ಪಾಲಿಕೆ ಆಯುಕ್ತ.
-22ಕೆಡಿವಿಜಿ1-ದಾವಣಗೆರೆ ಮಹಾ ನಗರ ಪಾಲಿಕೆಯ ಒಂದು ನೋಟ.