ಕನ್ನಡಪ್ರಭ ವಾರ್ತೆ, ತುರುವೇಕೆರೆ
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೌರಮ್ಮ ರವಿಕುಮಾರ್ ಮಾತನಾಡಿ ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಲು ಸಹಕರಿಸಿದ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರುಗಳು ಹಾಗೂ ಮಾಚೇನಹಳ್ಳಿ ಗ್ರಾಮಸ್ಥರುಗಳಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಹೇಮಂತ್ ಕುಮಾರ್, ಉಪಾಧ್ಯಕ್ಷ ರಾಜಶೇಖರಯ್ಯ, ಸದಸ್ಯರುಗಳಾದ ಶಂಕರಯ್ಯ, ಶಿವಕುಮಾರ ಸ್ವಾಮಿ, ಕಮಲ, ಶಶಿಧರ್, ಗಂಗಾಧರಸ್ವಾಮಿ, ಶಿವಣ್ಣ, ಅನುಸೂಯಮ್ಮ, ರಾಜೇಶ್ವರಿ, ಕಿರಣ್, ಲಕ್ಷ್ಮಮ್ಮ, ವಿನಯ್, ಪುಷ್ಪ, ಹರಿಣಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷೆ ಗೌರಮ್ಮ ರವಿಕುಮಾರ್ ರವರನ್ನು ಮುಖಂಡರಾದ ಮಾಚೇನಹಳ್ಳಿಯ ರಕ್ಷಿತ್, ಅನಿತಾ ನಂಜುಂಡಸ್ವಾಮಿ, ಗುತ್ತಿಗೆದಾರ ಲೋಕೇಶ್ ಬಾಬು, ಹುಲ್ಲೇಕೆರೆಯ ಬೋರೇಗೌಡ, ಹರಿಕಾನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಜಯ್ಯಣ್ಣ, ಮಾಚೇನಹಳ್ಳಿ ಲೋಕೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಗೌರೀಶ್, ಹಟ್ಟಿಹಳ್ಳಿ ಕಿರಣ್ ಕುಮಾರ್ ಸೇರಿದಂತೆ ಹಲವಾರು ಮಂದಿ ಶುಭ ಕೋರಿದರು. ಇದೇ ವೇಳೆ ನೂತನ ಅಧ್ಯಕ್ಷರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.