- ತಿಮ್ಮೇನಹಳ್ಳಿಯಲ್ಲಿ ಮತಯಾಚಿಸಿ ರೇಣುಕಾಚಾರ್ಯ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಇಡೀ ವಿಶ್ವ ಭಾರತ ನೋಡುವ ದೃಷ್ಟಿಯೇ ಬದಲಾಯಿತು. ಎರಡನೇ ಬಾರಿ ಮತ್ತೆ ಆಯ್ಕೆಯಾದಾಗ ಇಡೀ ವಿಶ್ವವೇ ಸಮಸ್ಯೆಗಳ ಪರಿಹಾರಕ್ಕೆ ಮೋದಿ ಅವರ ಬಳಿ ಬರುತ್ತಿದ್ದುದ್ದು ಭಾರತದ ಹೆಗ್ಗಳಿಕೆ. ಭಾರತ ಎಂದಾಕ್ಷಣ ಈಗ ಇಡೀ ವಿಶ್ವ ನಮ್ಮ ರಾಷ್ಟ್ರಕ್ಕೆ ಗೌರವ ನೀಡುತ್ತದೆ ಎಂದರು.ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಕ್ಷಣ ವಿದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರು. ಇಂದು ಭಾರತ ಆರ್ಥಿಕವಾಗಿ 5ನೇ ಸ್ಥಾನದಲ್ಲಿದೆ. 3ನೇ ಸ್ಥಾನಕ್ಕೂ ಬರಲಿದೆ ಎಂದರು.
- - - -16ಎಚ್ಎಲ್ಐ1:
ಹೊನ್ನಾಳಿ ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತಯಾಚಿಸಿದರು.