ಗಾಯತ್ರಿ ಸಿದ್ದೇಶ್ವರ ₹32.84 ಕೋಟಿ ಆಸ್ತಿ ಒಡತಿ

KannadaprabhaNewsNetwork |  
Published : Apr 16, 2024, 01:00 AM IST
GAYATRI SIDDESHWARA | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪತ್ನಿ ಸ್ಥಿರಾಸ್ತಿ 6.11 ಕೋಟಿ ಹಾಗೂ ಚರಾಸ್ತಿ 26.73 ಕೋಟಿ ಸೇರಿದಂತೆ ಒಟ್ಟು 32.84 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

- ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಳಿ 3.5 ಕೆಜಿ ಚಿನ್ನ, 5.50 ಕೆಜಿ ಬೆಳ್ಳಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪತ್ನಿ ಸ್ಥಿರಾಸ್ತಿ ₹6.11 ಕೋಟಿ ಹಾಗೂ ಚರಾಸ್ತಿ ₹26.73 ಕೋಟಿ ಸೇರಿದಂತೆ ಒಟ್ಟು ₹32.84 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಗಾಯತ್ರಿ ಸಿದ್ದೇಶ್ವರ ಕೈಯಲ್ಲಿ ₹87,949 ನಗದು ಇದೆ. ಬ್ಯಾಂಕಿನಲ್ಲಿ ₹48.44 ಲಕ್ಷ ಹಣ ಹೊಂದಿದ್ದಾರೆ. ವಿಮಾ ಪಾಲಿಸಿಗಳಲ್ಲಿ ₹22.34 ಲಕ್ಷ ಹೂಡಿಕೆ ಮಾಡಿದ್ದು, 3.5 ಕೆಜಿ ಚಿನ್ನಾಭರಣ, 5.50 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ₹14.70 ಲಕ್ಷ ಮೌಲ್ಯದ 2.04 ಎಕರೆ ಕೃಷಿ ಭೂಮಿ, ₹5.08 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, ₹21.50 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಗಾಯತ್ರಿ ಅವರು, ₹5.89 ಲಕ್ಷ ಸಾಲವನ್ನೂ ಹೊಂದಿದ್ದಾರೆ. ಯಾವುದೇ ವಾಹನ ಹೊಂದಿಲ್ಲ. ಯಾವುದೇ ಅಪರಾಧ ಪ್ರಕರಣ ಇಲ್ಲವೆಂದು ಘೋಷಣೆ ಮಾಡಿದ್ದಾರೆ.

- - - ಬಾಕ್ಸ್‌ 5 ವರ್ಷದಲ್ಲಿ ₹20.17 ಕೋಟಿ ಆಸ್ತಿ ಹೆಚ್ಚಳದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಒಟ್ಟು ಆಸ್ತಿ 5 ವರ್ಷದಲ್ಲಿ ₹20.17 ಕೋಟಿಗಳಷ್ಟು ಹೆಚ್ಚಳವಾಗಿದೆ. ಗಾಯತ್ರಿ ಸಿದ್ದೇಶ್ವರ ಪತಿ, ಸಂಸದ ಜಿ.ಎಂ.ಸಿದ್ದೇಶ್ವರ 2019ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಆಸ್ತಿ ವಿವರದಂತೆ ಗಾಯತ್ರಿ ಸಿದ್ದೇಶ್ವರ ₹4.76 ಕೋಟಿ ಚರಾಸ್ತಿ, ₹7.91 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು ₹12.67 ಕೋಟಿ ಆಸ್ತಿ ಹೊಂದಿದ್ದರು.

ಚುನಾವಣೆಗೆ ಇದೀಗ ಗಾಯತ್ರಿ ಸಿದ್ದೇಶ್ವರ ನಾಮಪತ್ರ ಜೊತೆ ಸಲ್ಲಿಸಿದ ಪ್ರಮಾಣದಲ್ಲಿ ಘೋಷಿಸಿದಂತೆ ₹6.11 ಕೋಟಿ ಸ್ಥಿರಾಸ್ತಿ, ₹26.73 ಕೋಟಿ ಮೌಲ್ಯದ ಚರಾಸ್ತಿ ಒಳಗೊಂಡಂತೆ ₹32.84 ಕೋಟಿ ಆಸ್ತಿ ಹೊಂದಿದ್ದಾರೆ. ಕಳೆದ 5 ವರ್ಷದಲ್ಲಿ ಗಾಯತ್ರಿ ಸಿದ್ದೇಶ್ವರರ ಆಸ್ತಿ 20.17 ಕೋಟಿ ರು.ಗಳಷ್ಟು ಆಸ್ತಿ ಹೆಚ್ಚಳವಾಗಿದೆ. ಸಂಸದ ಸಿದ್ದೇಶ್ವರ ಆಸ್ತಿ ಸಹ 5 ವರ್ಷದಲ್ಲಿ ಹೆಚ್ಚಾಗಿದೆ. ಕಳೆದ ಚುನಾವಣೆ ವೇಳೆ ಸಿದ್ದೇಶ್ವರ ಆಸ್ತಿ 19.39 ಕೋಟಿ ಇತ್ತು. ಈಗ ಪತ್ನಿ ಗಾಯತ್ರಿ ಸಿದ್ದೇಶ್ವರ ಸಲ್ಲಿಸಿದ ನಾಮಪತ್ರದಲ್ಲಿ 26.62 ಕೋಟಿ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದು, 5 ವರ್ಷದಲ್ಲಿ 7.23 ಕೋಟಿ ಆಸ್ತಿ ಹೆಚ್ಚಾಗಿದೆ. 2014ರಲ್ಲಿ ಡಾ.ಜಿ.ಎಂ.ಸಿದ್ದೇಶ್ವರ 12.29 ಕೋಟಿ ರು. ಆಸ್ತಿ ಹೊಂದಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್