* ಚಾಲಕರಿಗೆ ಸನ್ಮಾನ, ಸಮವಸ್ತ್ರ ವಿತರಣೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಬಸವರಾಜ ದೇವರು ವಿಶ್ವಾಸ
ಕನ್ನಡಪ್ರಭ ವಾರ್ತೆ ದಾವಣಗೆರೆ2024ರ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಂಬಳಿ ಬೀಸುವ ಮೂಲಕ ಈ ಕ್ಷೇತ್ರವನ್ನು ಇನ್ ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸ್ಥಾಪಕ ಜಿ.ಬಿ.ವಿನಯಕುಮಾರ ಪ್ರತಿನಿಧಿಸುವುದು ನಿಶ್ಚಿತ ಎಂದು ಧಾರವಾಡದ ಶ್ರೀ ರೇವಣಸಿದ್ದೇಶ್ವರ ಮಠದ ಡಾ.ಬಸವರಾಜ ದೇವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಇನ್ ಸೈಟ್ಸ್ ಐಎಎಸ್ ಸಂಸ್ಥೆ, ವಿನಯ ಮಾರ್ಗ ಟ್ರಸ್ಟ್, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಟೋ, ಲಾರಿ, ಗೂಡ್ಸ್, ಟ್ಯಾಕ್ಸಿ ಚಾಲಕರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚಾಲಕರಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ ಅತೀ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿನಯ್ ತಮ್ಮ ವಿದ್ಯೆ, ಜ್ಞಾನದಿಂದಲೇ ದೇಶಾದ್ಯಂತ ಭಾವಿ ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ, ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಜ್ಞಾನದಾಸೋಹ ಮಾಡುತ್ತಿರುವುದು ಮಾದರಿ ಕಾರ್ಯ ಎಂದರು.ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ವಿನಯಕುಮಾರ್ ಗೆ ಕ್ಷೇತ್ರದ ಮತದಾರರು ಮಡಿಲಿನ ಮಗುವಂತೆ ಸಲಹಿ ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿ ಆಶೀರ್ವದಿಸಿ ಬೆನ್ನೆಲುಬಾಗಿ ನಿಲ್ಲಬೇಕು. ವರ್ಷದ ಹಿಂದೆ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕಂಬಳಿ ಬೀಸುವರೆಂದಿದ್ದೆ. ಅದೇ ರೀತಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಹುದ್ದೆ ಬಯಸುವ ವಿದ್ಯಾರ್ಥಿ, ಯುವ ಜನರಿಗೆ ಮಾರ್ಗದರ್ಶನ, ತರಬೇತಿ ನೀಡಿ ಇಡೀ ದೇಶವೇ ಇನ್ಸೈಟ್ಸ್ ಅಕಾಡೆಮಿ ಕಡೆಗೆ ಕುತೂಹಲದಿಂದ ನೋಡುವಂತೆ ಮಾಡಿರುವುದು ಕಡಿಮೆ ಸಾಧನೆಯಲ್ಲ. ವಿನಯಕುಮಾರ ರಾಜ್ಯದಲ್ಲಿ ಎರಡನೇ ಸಿದ್ದರಾಮಯ್ಯ ಆಗುವ ಅರ್ಹತೆ ಹೊಂದಿದ್ದಾರೆ. ಈಗ ಉತ್ತರ, ದಕ್ಷಿಣ ಮಾತ್ರವಲ್ಲ, ಮಧ್ಯ ಕರ್ನಾಟಕದಲ್ಲೂ ವಿನಯಕುಮಾರ್ ರಂತಹ ಬುದ್ಧಿವಂತ, ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವ ನಾಯಕತ್ವದ ಪ್ರಬಲ ನಾಯಕರ ಅಗತ್ಯವಿದೆ ಎಂದು ಬಸವರಾಜ ದೇವರು ಕರೆ ನೀಡಿದರು.ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮತಾಭಾವ, ಸಮಷ್ಠಿ ಪ್ರಜ್ಞೆ, ಸಾಧಿಸುವ ಗುರಿ, ಛಲ, ಲೋಕಕ್ಕೆ ಉಪಕಾರ ಮಾಡುವ ಮನಸ್ಸಿರುವವರೇ ನಿಜವಾದ ನಾಯಕರು. ಅಂತಹ ನಾಯಕತ್ವದ ಎಲ್ಲಾ ಗುಣಗಳೂ ವಿನಯಕುಮಾರಲ್ಲಿ ಕಂಡು ಬರುತ್ತಿವೆ ಎಂದರು.
ಜಡೇಸಿದ್ಧ ಶ್ರೀ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಪರಮಹಂಸ ಮುರುಳೀಧರ ಸ್ವಾಮೀಜಿ, ಶ್ರೀ ಯೋಗಾನಂದ ಸ್ವಾಮೀಜಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯಕುಮಾರ, ಜಿ.ಬಸವಂತಪ್ಪ ಇತರರಿದ್ದರು. ಇದೇ ವೇಳೆ ಚಾಲಕರಿಗೆ ಸನ್ಮಾನ, ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಜಿ.ಬಿ.ವಿನಯ ಕುಮಾರ ಮಕ್ಕಳಿಗೆ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡಿದರು.ಕೋಟ್..ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರದ ಗುರಿ ಹೊಂದಿರುವ ವಿನಯಕುಮಾರ ಆಸೆಯಂತೆ ಅದು ಕಾರ್ಯರೂಪಕ್ಕೆ ಬಂದರೆ ಮನೆಗೊಬ್ಬ ಸರ್ಕಾರಿ ಅಧಿಕಾರಿಗಳು ಬರುತ್ತಾರೆ. ವಿದ್ಯಾರ್ಥಿ, ಯುವ ಜನಾಂಗವನ್ನು ಗಮನದಲ್ಲಿಟ್ಟು ವಿನಯಕುಮಾರ ಶಿಕ್ಷಣದ ಮಹತ್ವ, ವ್ಯಕ್ತಿತ್ವ ವಿಕಸನ ಶಿಬಿರ, ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಿ. ಶ್ರೀ ಓಂಕಾರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠ.............
ಕ್ಯಾಪ್ಷನ್, 26ಕೆಡಿವಿಜಿ5-ದಾವಣಗೆರೆಯಲ್ಲಿ ಇನ್ ಸೈಟ್ಸ್, ವಿನಯ ಮಾರ್ಗ ಟ್ರಸ್ಟ್, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಟೋ, ಲಾರಿ, ಗೂಡ್ಸ್, ಟ್ಯಾಕ್ಸಿ ಚಾಲಕರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚಾಲಕರಿಗೆ ಸಮವಸ್ತ್ರ ವಿತರಣೆ ಸಮಾರಂಭ ಉದ್ಘಾಟನೆಯ ಗಣ್ಯರು ನೆರವೇರಿಸಿದರು. ..............ಪ್ಯಾನಲ್ ಫೋಟೊ///
26ಕೆಡಿವಿಜಿ6- ದಾವಣಗೆರೆಯಲ್ಲಿ ಭಾನುವಾರ ಇನ್ ಸೈಟ್ಸ್, ವಿನಯ ಮಾರ್ಗ ಟ್ರಸ್ಟ್, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಟೋ, ಲಾರಿ, ಗೂಡ್ಸ್, ಟ್ಯಾಕ್ಸಿ ಚಾಲಕರಿಗೆ ಸನ್ಮಾನ ಸಮಾರಂಭದಲ್ಲಿ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಯಿತು.