ಎಲ್ಲರ ಮನ ಸೆಳೆದ ಚಿಕಾಗೋ ನ್ಯೂ ಅರೆನಾದಲ್ಲಿ ನಡೆದ ಗೀತಾ ಉತ್ಸವ

KannadaprabhaNewsNetwork |  
Published : Jul 22, 2024, 01:17 AM IST
46 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕೇವಲ 10 ತಿಂಗಳಿನಲ್ಲಿ ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿದುದು ವಿಶೇಷ. ಎಸ್.ಜಿ.ಎಸ್ ಗೀತಾ ಫೌಂಡೇಶನ್ ಮೂಲಕ, 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗತಿಕವಾಗಿ ಪದವಿ ಪಡೆದಿದ್ದಾರೆ. ಈ ಜಾಗತಿಕ ಚಳವಳಿಯನ್ನು ಸಕ್ರಿಯಗೊಳಿಸಲೆಂದೇ ಎಸ್.ಜಿ.ಎಸ್ ಗೀತಾ ಫೌಂಡೇಷನ್ 500ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯುಎಸ್ ನ ಇಲಿನಾಯಸ್ ನ ಚಿಕಾಗೋದ ನ್ಯೂ ಅರೆನಾದಲ್ಲಿ ನಡೆದ ಗೀತಾ ಉತ್ಸವ‌ ಎಲ್ಲರ ಮನ ಸೂರೆಗೊಂಡಿತು.

ಎಸ್.ಜಿ.ಎಸ್ ಗೀತಾ ಫೌಂಡೇಶನ್ ಮತ್ತು ಕೃಷ್ಣ ದತ್ತ ಹನುಮಾನ್ ದೇವಸ್ಥಾನವು ಅತಿದೊಡ್ಡ ಯುಎಸ್ ಗೀತಾ ಉತ್ಸವವನ್ನು ಆಯೋಜಿಸಿದ್ದವು.

ಎಸ್.ಜಿ.ಎಸ್ ಗೀತಾ ಫೌಂಡೇಶನ್‌ನಿಂದ ನಡೆದ ಈ ಗೀತಾ ಉತ್ಸವವು ಯುಎಸ್ ನಲ್ಲಿ ಇದುವರೆಗೆ ನಡೆದಿರುವ ಭಗವದ್ಗೀತೆಯ ಅತಿ ದೊಡ್ಡ ಕಾರ್ಯಕ್ರಮ ಎಂದೇ ಗಣ್ಯರು ಬಣ್ಣಿಸಿದ್ದಾರೆ.

ವಿದ್ಯಾರ್ಥಿಗಳು ಕೇವಲ 10 ತಿಂಗಳಿನಲ್ಲಿ ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿದುದು ವಿಶೇಷ. ಎಸ್.ಜಿ.ಎಸ್ ಗೀತಾ ಫೌಂಡೇಶನ್ ಮೂಲಕ, 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗತಿಕವಾಗಿ ಪದವಿ ಪಡೆದಿದ್ದಾರೆ.

ಈ ಜಾಗತಿಕ ಚಳವಳಿಯನ್ನು ಸಕ್ರಿಯಗೊಳಿಸಲೆಂದೇ ಎಸ್.ಜಿ.ಎಸ್ ಗೀತಾ ಫೌಂಡೇಷನ್ 500ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ.

ಕಿರಿಯ ಪದವೀಧರರು 4 ವರ್ಷ ವಯಸ್ಸಿನವರು, ಹಿರಿಯ ಪದವೀಧರರು 85 ವರ್ಷ ವಯಸ್ಸಿನವರು, 2,000 ಕಂಠಪಾಠಿಗಳು 10 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು. 1,350 ಕಂಠಪಾಠ ಮಾಡುವವರು ವಯಸ್ಕರು ಗೀತಾ ಕಲಿಕೆಯನ್ನು ಸುಗಮಗೊಳಿಸಿದರು.

ಗೀತಾ ಉತ್ಸವದಲ್ಲಿ, ಸಾವಿರಾರು ಜನರು ಏಕಸ್ವರದಲ್ಲಿ ಗೀತಾ ಪಠಣ ಮಾಡಿದುದು ನ್ಯೂ ಅರೆನಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಗಣ್ಯರಾದ ರಾಜಾ ಕೃಷ್ಣಮೂರ್ತಿ ಮತ್ತು ಜೂಲಿಯಾನಾ ಸ್ಟಾರ್ಟನ್, ಇಲಿನಾಯ್ಸ್‌ ನ ಲೆಫ್ಟಿನೆಂಟ್ ಗವರ್ನರ್, ಇಲಿನಾಯ್ಸ್ ನಗರಗಳ ಏಳು ಮೇಯರ್‌ ಗಳು ಇದ್ದು ಗೀತಾ ಉತ್ಸವವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಚಿಕಾಗೋದ ನ್ಯೂ ಅರೆನಾದಲ್ಲಿ ಇಂದಿನ ಭಗವದ್ಗೀತೆ ಕಾರ್ಯಕ್ರಮವು ವಿದ್ಯಾರ್ಥಿಗಳು, ಪ್ರೇಕ್ಷಕರು ಮತ್ತು ದೊಡ್ಡ ಸನಾತನ ಧರ್ಮ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲನ್ನು ನೀಡಿದೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮುಖದಲ್ಲೂ ಶ್ರೀಕೃಷ್ಣನನ್ನು ಸಾಕ್ಷೀಕರಿಸುವುದು ನಿಜಕ್ಕೂ ವಿಸ್ಮಯ ಹುಟ್ಟಿಸುವಂತಿತ್ತು ಎಂದು ಬಣ್ಣಿಸಿದರು.

ಭಗವದ್ಗೀತೆಯು ನಮ್ಮ ಆತ್ಮಸಾಕ್ಷಾತ್ಕಾರದ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ, ಶೈಕ್ಷಣಿಕ ಆನಂದದಿಂದ ನಿಜವಾದ, ಶಾಶ್ವತವಾದ ಸಂತೋಷವನ್ನು ನೀಡುತ್ತದೆ ಎಂದು ಅವರು ತಿಳಿಸಿದರು.

ಭಗವದ್ಗೀತೆಯ ಈ ಉತ್ಸವ ಯುಎಸ್ ಬಹಳಷ್ಟು ಕುಟುಂಬಗಳು, ಸ್ವಯಂಸೇವಕರು ಮತ್ತು ಇಡೀ ಕಾರ್ಯಕ್ರಮದ ತಂಡದ ಸಮರ್ಪಣೆ ನನ್ನಲ್ಲಿ ಭಾವ ಪರವಶತೆಯನ್ನು ತುಂಬಿದೆ ಎಂದು ಶ್ರೀಗಳು ತಿಳಿಸಿದರು.

ಶ್ರೀ ಕೃಷ್ಣ, ಭಗವಾನ್ ದತ್ತ ಮತ್ತು ಗೀತಾ ಮಾತೆಯ ಆಶೀರ್ವಾದದಿಂದ ಈ ವಿದ್ಯಾರ್ಥಿಗಳ ಜೀವನವು ಆನಂದ ಮತ್ತು ಸಮೃದ್ಧವಾಗಿದೆ. ಎಸ್.ಜಿ.ಎಸ್ ಗೀತಾ ಫೌಂಡೇಶನ್ ಮುಂದಿನ ದಿನಗಳಲ್ಲಿ 100,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ ಎಂದು ಇದೇ ವೇಳೆ ಶ್ರೀಗಳು ಘೋಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ