ರಿಯಾಯಿತಿ ದರದಲ್ಲಿ ಗಿಡಮರ ಪಡೆದು ಬೆಳೆಸಿ, ಪೋಷಿಸಿ

KannadaprabhaNewsNetwork |  
Published : Apr 14, 2025, 01:20 AM IST
 ರೈತರಿಗೆ ಗುಣಮಟ್ಟದ ಸಸಿಗಳನ್ನು ಬೆಳೆಸುವುದು ಮತ್ತು ಕೃಷಿ ಅರಣ್ಯ ಕುರಿತು ತರಬೇತಿ ಕಾಯಾರ್ಗಾರದಲ್ಲಿ ಹುನಗುಂದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್ ಡಿ ಬಬಲಾದಿ ರೈತರಿಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಶ್ರೀಗಂಧ, ಹೆಬ್ಬೇವು, ಮಹಾಗನಿ ಸೇರಿದಂತೆ ಬಲು ಬೇಡಿಕೆಯ ಹಾಗೂ ಆರ್ಥಿಕವಾಗಿ ಲಾಭ ತಂದುಕೊಡುವ ಗಿಡಗಳನ್ನು ಪಡೆದು ಬೆಳೆಯಬಹುದು.

ಕನ್ನಡಪ್ರಭ ವಾರ್ತೆ ಕಮತಗಿ

ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಪಾಲನಾಲಯ (ನರ್ಸರಿ) ಕೇಂದ್ರದಿಂದ ಸಸಿಗಳನ್ನು ಪಡೆದು ತಮ್ಮ ಜಮೀನುಗಳ ಬದುವಿನಲ್ಲಿ ನೆಟ್ಟು ಬೆಳೆಸಿ ಪೋಷಿಸಲು ಸರಕಾರವೇ ಸಹಾಯಧನ ನೀಡುತ್ತಿದೆ ಎಂದು ಹುನಗುಂದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಡಿ. ಬಬಲಾದಿ ಹೇಳಿದರು.ಸಮೀಪದ ಹಿರೇಮಾಗಿ ಸಾಮಾಜಿಕ ಅರಣ್ಯ ಸಸ್ಯಪಾಲನಾಲಯದಲ್ಲಿ ಹುನಗುಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೃಷಿ ವಿಕಾಸ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಅರಿವು ಆಂದೋಲನದಡಿಯಲ್ಲಿ ರೈತರಿಗೆ ಗುಣಮಟ್ಟದ ಸಸಿ ಬೆಳೆಸುವುದು ಮತ್ತು ಕೃಷಿ ಅರಣ್ಯ ಕುರಿತು ತರಬೇತಿ ಕಾಯಾರ್ಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಶ್ರೀಗಂಧ, ಹೆಬ್ಬೇವು, ಮಹಾಗನಿ ಸೇರಿದಂತೆ ಬಲು ಬೇಡಿಕೆಯ ಹಾಗೂ ಆರ್ಥಿಕವಾಗಿ ಲಾಭ ತಂದುಕೊಡುವ ಗಿಡಗಳನ್ನು ಪಡೆದು ಬೆಳೆಯಬಹುದು. ಸಾಂಪ್ರದಾಯಿಕ ಕೃಷಿಯ ಹೊರತಾಗಿ ಅರಣ್ಯ ಕೃಷಿಯಿಂದಲೂ ರೈತರು ಆದಾಯ ಗಳಿಸಲು ಈ ಯೋಜನೆ ಸಹಕಾರಿಯಾಗಿದೆ. ರೈತರು ಮರಗಳಿಂದ ಸಿಗುವ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು,ಇತ್ಯಾದಿ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಜಮೀನಿನ ಬದುವಿನಲ್ಲಿ ಹಚ್ಚಿ ಬೆಳೆಸಿದ ಗಿಡಮರಗಳನ್ನು ಸಂರಕ್ಷಣೆ ಮಾಡುವುದು ಬಹುದೊಡ್ಡ ಜವಾಬ್ದಾರಿಯಾಗಿದ್ದು, ಬೇಸಿಗೆ ಸಮಯದಲ್ಲಿ ಗಿಡಮರಗಳ ನೆರಳು ಪ್ರತಿಯೊಬ್ಬ ಮನುಷ್ಯ ಹಾಗೂ ಜಾನುವಾರುಗಳ ಆಶ್ರಯ ಪಡೆಯಲು ಬಹಳಷ್ಟು ಅನಕೂಲವಾಗಿದೆ.ಗಿಡಮರಗಳಿಂದ ಊದುರಿದ ಎಲೆಗಳು ಜಮೀನಿನಲ್ಲೇ ಬಿಟ್ಟರೆ ಅವು ಗೊಬ್ಬರವಾಗಿ ಬೆಳೆಗೆ ಬಹಳಷ್ಟು ಸಹಕಾರಿಯಾಗಲಿದ್ದು, ರೈತರು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿ ಗಿಡಿಮರಗಳ, ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳುವುದು ಅತ್ಯವಶ್ಯವಾಗಿದೆ ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಿ ಎಚ್ ಚವಾಣ್, ಸಿಬ್ಬಂದಿ ಮಂಜುನಾಥ ಚಳಗೇರಿ, ಸಂತೋಷ ಮರೋಳ ಹಾಗೂ ಪ್ರಗತಿಪರ ರೈತರಾದ ಎಂ.ಪಿ. ನಾಡಗೌಡ, ಹುನಗುಂದ, ಇಳಕಲ್ ತಾಲೂಕಿನ ರೈತರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ