ಹೊನ್ನಾಳಿ: ಮುಕ್ತೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ

KannadaprabhaNewsNetwork |  
Published : Feb 02, 2025, 01:01 AM IST
ಹೊನ್ನಾಳಿ ಫೋಟೋ 30ಎಚ್.ಎಲ್.ಐ1. ಹೊನ್ನಾ‍ಳಿ ತಾಲೂಕು ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ ಅವರು ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಗ್ರಾ.ಪಂ. ಉಪಾದ್ಯಕ್ಷೆ, ಸದಸ್ಯರುಗಳು ಗ್ರಾಮದ ಮುಖಂಡರು ಅಭಿನಂದಿಸಿ, ಶುಭ ಕೋರಿದರು | Kannada Prabha

ಸಾರಾಂಶ

ತಾಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್. ಹನುಮಂತಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಭೂ ಸೇನಾ ನಿಗಮದ (ಕೆ.ಆರ್.ಐ.ಡಿ,ಎಲ್.) ಸಹಾಯಕ ಕಾರ್ಯಪಾಲಕ ಆಭಿಯಂತರ ನಿತಿನ್ ಜಾಧವ್ ಘೋಷಣೆ ಮಾಡಿದ್ದಾರೆ.

- ಸವಿತಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ- - - ಹೊನ್ನಾಳಿ: ತಾಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್. ಹನುಮಂತಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಭೂ ಸೇನಾ ನಿಗಮದ (ಕೆ.ಆರ್.ಐ.ಡಿ,ಎಲ್.) ಸಹಾಯಕ ಕಾರ್ಯಪಾಲಕ ಆಭಿಯಂತರ ನಿತಿನ್ ಜಾಧವ್ ಘೋಷಣೆ ಮಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯರ ಬಲವಿದೆ. ಅಧ್ಯಕ್ಷೆಯಾಗಿದ್ದ ಆರ್.ಸವಿತಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಜಿ.ಎಚ್. ಹುನುಮಂತಪ್ಪ ಅವರೋಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಇದ್ದ ಕಾರಣ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ ಆವಿರೋಧವಾಗಿ ಅಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಆರ್.ಸವಿತಾ, ಕೆ.ಎಸ್. ಕಲ್ಲೇಶ್, ಯಶೋಧಮ್ಮ, ಎ.ಕೆ.ಬಾಲಪ್ಪ, ಜಿ.ಸಿ. ಪುಪ್ಪಾ, ಕೆ.ಬಿ.ಮಹಾಂತೇಶ, ರಮೀಜಾ ಬಿ, ಸರೋಜಮ್ಮ, ಹನುಮಂತಪ್ಪ ಟಿ.ಬಿ. ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಮುಖಂಡರಾದ ಚಂದಪ್ಪ, ಮರುಳಸಿದ್ದಪ್ಪ ಇನ್ನಿತರ ಮುಖಂಡರು ಇದ್ದರು.

ಚುನಾವಣ ಪ್ರಕ್ರಿಯೇ ಮುಗಿದ ನಂತರ ಸ್ಥಳಕ್ಕೆ ಅಗಮಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

- - - -30ಎಚ್ಎಲ್.ಐ1.ಜೆಪಿಜಿ:

ಹೊನ್ನಾ‍ಳಿ ತಾಲೂಕು ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ ಅವರನ್ನು ಗ್ರಾಪಂ ಉಪಾದ್ಯಕ್ಷೆ, ಸದಸ್ಯರು, ಗ್ರಾಮದ ಮುಖಂಡರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''