ಕನ್ನಡಪ್ರಭ ವಾರ್ತೆ ಹಿರೇಕೆರೂರು
ಪಟ್ಟಣದ ಗುರುಭವನದಲ್ಲಿ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಅಡಿ ವಿಶೇಷ ಚೇತನ ಮಕ್ಕಳಿಗೆ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಅಂಗವಿಕಲ ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.
ಅಲಿಮ್ಕೊ ಕಂಪನಿಯವರು ನಿಮ್ಮ ತಾಲೂಕಿಗೆ ಒಟ್ಟು ೮೯ ಸಾಧನ ಸಲಕರಣೆಗಳನ್ನು ನೀಡಿದ್ದಾರೆ. ಸರ್ಕಾರ ಈ ಕಂಪನಿಗೆ ಅನುದಾನ ನೀಡುವುದು. ಇದರ ಸದುಪಯೋಗವನ್ನು ಪಾಲಕರು ತಮ್ಮ ಮಕ್ಕಳ ಸಲುವಾಗಿ ಬಳಸಬೇಕು. ಈ ಮಕ್ಕಳಿಗಾಗಿ ಶಾಸಕರ ಅನುದಾನದಲ್ಲಿ ಶೇ. ೪ ಮೀಸಲಿಡುತ್ತೇನೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಪ್ಪಗೌಡರ, ಕಾರ್ಯದರ್ಶಿ ಆರ್.ಎಂ. ಪೂಜಾರ, ಸುರೇಶ ಅಜ್ಜಪ್ಪನವರ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಇಐ ಆರ್.ಟಿ.ಗಳಾದ ಹನುಮಂತಪ್ಪ, ಮಹೇಶ್ ಸುರ್ವೆ, ಭಾರತಿ ಇದ್ದರು. ಬಿಆರ್ಪಿ ನಂದೀಶ್ ಲಮಾಣಿ ಕಾರ್ಯಕ್ರಮ ನಿರೂಪಿಸಿದರು.